Sunday, August 14, 2011

ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯಗಳು.

ನೇ ಸ್ವಾತಂತ್ರ್ಯ ದಿನಾಚಾರಣೆ ಆಗಸ್ಟ್ ೧೫ ಸೋಮವಾರ .
ಇದು ನಮ್ಮೆಲ್ಲರ ಸುದಿನ .
ಇ ಸಂದರ್ಭದಲ್ಲಿ ನಾವೆಲ್ಲರೂ ಆಚರಣೆಗಾಗಿ ರಜಾ ದಿನವಾಗಿ ಮೋಜು ಮಸ್ತಿ ,ಪಿಕ್ನಿಕ್ಕಿಗೆ ಕಾಲ ಕಳೆಯ ಬಾರದು .
ಇ ಸಮಯ ವನ್ನು ಮಕ್ಕಳಿಗೆ ಸ್ವಾತಂತ್ರ್ಯ ಯೋಧರ ತ್ಯಾಗ ಮತ್ತು ಬಲಿದಾನದ ಬಗ್ಗೆ ಚರಿತ್ರೆಯ ಪುಟ ಗಳನ್ನೂ ವಿವರಿಸಿ .ಮುಂದಿನ ದೇಶ ಪ್ರೇಮಿ ಗಳಾಗಿ ಪರಿವರ್ತಿ ಸಬೇಕು .
ಈಗಿನ ಸ್ವಾರ್ತಿ ರಾಜಕಾ ರಣಿಗಳು ನಡೆದು ಬಂದ ದಾರಿಯಲ್ಲಿ ನಡೆಯದೆ ಬ್ರಷ್ಟಾಚಾರದ.ದೇಶ ದ್ರೋಹಿ ಚಟುವಟಿಕೆಗಳ ಲ್ಲಿ ಶಿಕ್ಷಣ ಮುಂದುವರಿಸಲು ಕಲಿಸ ಬಾರದು .ಮನೆಯೇ ಮೊದಲ ಪಾಠ ಶಾಲೆ .ಹೆತ್ತವರೇ ಗುರುಗಳು .
ಉತ್ತಮ ಬೀಜ ಸಸಿ ನೆಡುವುದರಿಂದ ಮುಂದೆ ಬರುವ ಮರ /ಫಲಿತಾಂಶದ ಬಗ್ಗೆ ಒಳ್ಳೆಯದನ್ನು ಬಯಸ ಬಹುದಲ್ಲವೇ
ಚಿತ್ರ ಮಂದಿರ ಸಂಗೀತ.ಮಾಧ್ಯಮಗಳಲ್ಲಿ ದೇಶ ಭಕ್ತಿ ತುಮ್ಬಿರುವುದನ್ನೇ ಆರಿಸಿ .
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ಸ್ಮರಿಸ ಬೇಕು .ಅವರು ಹಾಕಿದ ಸನ್ಮಾರ್ಗ ದಲ್ಲಿ ಮುನ್ನಡೆಯ ಬೇಕು .
ಇದುವೇ ನಿಜವಾದ ಸ್ವಾತಂತ್ರ್ಯ ದಿನಾಚಾರಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯ ಗಳೊಂದಿಗೆ
ಕುಂದಾಪುರ ನಾಗೇಶ್ ಪೈ .
ಜೈ ಭಾರತ್ .

ಬೋಲೋ ಭಾರತ್ ಮಾತಾ ಕೀ ಜೈ .

Sunday, July 24, 2011

ಲೋಕಾಯುಕ್ತರ ವರದಿ ಮತ್ತು ಪ್ರಭಾವ

ಇದು ನಮ್ಮ ಭವ್ಯ ಭಾರತ
ರಾಮಾಯಣ ,ಮಹಾಭಾರತ ಎಲ್ಲಾ ಯುಗ ಗಳಿಂದಲೂ ನಮ್ಮ ಭಾರತೀಯ ಸಂಸ್ಕ್ರತಿ ,ಕಲೆ ಪರಂಪರೆ ಗಳನ್ನೂ ಉಳಿಸಿಕೊಂಡು ಬಂದಿದೆ .
ಪಿತ್ರ ವಾಖ್ಯ ಪರಿಪಾಲನೆಗಾಗಿ ರಾಜ ಶ್ರೀ ರಾಮಚಂದ್ರನು ರಾಜ್ಯ ಭಾರವನ್ನು ತಮ್ಮ ಭರತನಿಗೆ ಒಪ್ಪಿಸಿ ಕುಟುಂಬ ಸಮೇತವಾಗಿ ವನವಾ ಸಕ್ಕಾಗಿ ಹದಿನಾಲ್ಕು ವರುಷ ಕಾಡಿ ಗೆ ಹೋದ ವಿಷಯ ಪ್ರತಿಯೊಬ್ಬ ಪ್ರಜೆಗೆ ತಿಳಿದಿರುತ್ತದೆ .
ಇ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆ ಪಡ ಬೇಕಾಗಿದೆ .
ಆದರೆ ಹಗರಣಗಳ ಸಂಕೋಲೆಗಳಿಂದ ತುಂಬಿರುವ ಆಡಳಿತದಲ್ಲಿ ಮುಖ್ಯಮಂತ್ರಿ ಮತ್ತು ಇನ್ನಿತರ ಮಂತ್ರಿಗಳು
ಲೋಕಾಯುಕ್ತ ವರದಿ ಯಲ್ಲಿ ತಮ್ಮ ಹೆಸರು ಸೂಚಿಸಿದರೂ ಖುರ್ಚಿ ತ್ಯಾಗ ಮಾಡಿ ಬೇರೆ ಪ್ರಜೆ ಗಳಿಗೆ ಆದರ್ಶಪ್ರಾ ಯರಾಗಿ ಮಾರ್ಗ ದರ್ಶಕ ರಾಗ ಬೇಕು .ಒಂದು ವೇಳೆ ಮರು ಚುನಾವಣೆ ಇಲ್ಲದೆ ಆಡಳಿತ ಸರಕಾರ ಮುಂದುವರಿಯುವುದಾದರೆ ಕಳಂಕಿತ ಮುಖ್ಯಮಂತ್ರಿ /ಮಂತ್ರಿ ಮತ್ತು ರಾಜ್ಯಪಾಲರನ್ನು ಬದಲಿಸುವುದು ಪ್ರಜಾತಂತ್ರಕ್ಕೆ ಒಳ್ಳೆಯದು .ರಾಜ್ಯ ಪಾಲರು ಕೂಡ ವಿರೋಧ ಪಕ್ಷಗಳ ತಾಳಕ್ಕೆ ಸರಿಯಾಗಿ ಕುಣಿಯುವ ರಾಜ್ಯ ಪಾಲ ರನ್ನು ಬದಲಿಸಿದಾಗ ಕರ್ನಾಟಕ ರಾಜ್ಯಕ್ಕೆ ಒಳಿತು ಖಂಡಿತ .
ರಾಜ್ಯದ ಜನತೆ ಮರು ಚುನಾವಣೆ ಯಿಂದ ಜನತೆಗೆ ನೆಮ್ಮದಿ ಬಯಸುವುದೇ?
ಆದರೆ ವಿಧಾನಸಭೆ ವಿಸರ್ಜನೆ ಉತ್ತಮ ಮಾರ್ಗ
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇ ಬೇಕು
ಸತ್ಯ ಮೇವ ಜಯತೇ .
ಸಮಯವೇ ಇದಕ್ಕೆ ಉತ್ತರ .
ಸರ್ವೆ ಜನ : ಸುಕಿನೋ ಭವಂತು .
ಕುಂದಾಪುರ ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ

Saturday, July 9, 2011

ಉಪವಾಸ ಒಂದು ಶುದ್ಧೀಕರಣ ಮಾರ್ಗವೇ

ಉಪವಾಸ ಒಂದು ಶುದ್ಧೀಕರಣದ ಮಾರ್ಗ .
ಸಾಮಾನ್ಯವಾಗಿ ಕುಡಿಯುವ ನೀರಿನ ತೊಟ್ಟಿ ಯನ್ನು ಆಗಾಗ್ಗೆ ಶುದ್ಧಿ ಮಾಡಲು ತುಂಬಿದ ತೊಟ್ಟಿ ಯನ್ನು ಸಂಪೂರ್ಣ ಖಾಲಿ ಮಾಡಿ ಕ್ರಿಮಿನಾಶಕ ಸಿಂಪಡಿಸಿ ದ ನಂತರ ಪುನಃ ನೀರು ತುಂಬುತ್ತಾರೆ .ಧಾರ್ಮಿಕ ಪದ್ದತಿಯಲ್ಲಿ ನೀರು ತುಂಬುವ ಹಬ್ಬ ಒಂದು ಶುದ್ಧೀಕರಣ ವೂ ಹೌದು.ವಾರಕೊಮ್ಮೆ ಗುರುವಾರ /ಶನಿವಾರ ಉಪವಾಸ ವ್ರತ ಇಟ್ಟಿರುತ್ತಾರೆ .ಫ್ರಿಡ್ಜ್ ಕೂಡ ಆಗಾಗ್ಗೆ ಖಾಲಿ ಮಾಡುತ್ತ ಶುದ್ಧ ಆಹಾರ ತುಂಬಿ ಇಡಬೇಕು .ಅರೋಗ್ಯ ದ್ರಷ್ಟಿಯಲ್ಲಿ ಬಹಳ ಉತ್ತಮ ಸಲಹೆ ನಾವೆಲ್ಲರೂ ಪಾಲಿಸಬೇಕು .ಹಿಂದಿನ ಕಾಲದಲ್ಲಿ ರಷಿ/ಮುನಿ ಗಳು ತಪಸ್ಸು ಮಾಡಿ ಶುದ್ಧಿ ಮಾಡಿಕೊಂಡು ದೇವರ ವರ ಬೇಡಿ ಪಡೆದು ಧಾರ್ಮಿಕ ಕೆಲಸ ಮಾಡಿ ಲೋಕ ಕಲ್ಯಾಣದಲ್ಲಿ ತಾವು .ಪವಿತ್ರವಾದ ಮನಸ್ಸಿನವ ರಾಗುತ್ತಾರೆ .
ಜನ ಸಮಾಜ ಮತ್ತು ದೇಶ ಕಲ್ಯಾಣ ವಾಗಿ ಸಂತೋಷ ದಿಂದ ತುಂಬಿರುತ್ತಾರೆ .ಇದು ಉಪವಾಸದ ಪ್ರಭಾವ .ಇದೊಂದು ದೇಹ ಶುದ್ಧಿ ಆತ್ಮ ಶುದ್ಧಿ .ಮಾನಸಿಕವಾಗಿ ಶಕ್ತಿ ಬರುತ್ತದೆ .
ಮಹಾತ್ಮ ಗಾಂಧೀಜಿ ಯವರ ಮಾರ್ಗವು ಇ ತತ್ವ ವನ್ನು ಪಾಲಿಸಿದೆ .ಸ್ವಾತಂತ್ರ್ಯದ ಹೋರಾಟದಲ್ಲಿ ಉಪವಾಸ ವ್ರತ ಸಂಪೂರ್ಣ ಫಲ ಕೊಟ್ಟಿದೆ .
ಇತ್ತೀಚೆಗಿನ ದಿನಗಳು ಉಪವಾಸಕ್ಕೆ ಮಹತ್ವ ಇಲ್ಲದಂತಾಗಿದೆ.
ರಾಜಕಾರಣಿಗಳ ಬಲಹೀನತೆ ಉಪವಾಸ ರೂಪದಲ್ಲಿ ತೋರಿಸಿದರೆ ಉಪವಾಸ ಮಹತ್ವ ಕಳೆದು ಕೊಳ್ಳು ತ್ತದೆ .
ಯೋಗಾ ಗುರೂ ರಾಮದೇವ್ ಉಪವಾಸ ಮಾಡದೇ ಯೋಗಾ ಸನ ಗಳಲ್ಲಿ ಮುಂದುವರಿದರೆ ಅವರು ಇನ್ನೂ ಹೆಚ್ಚಿನ ಪ್ರಭಾವಿ ಪುರುಷ ರಾಗುತ್ತಿದ್ದರು .
ಇ ಸ್ಥಿತಿ ಎಲ್ಲಾ ರಾಜಕಾರಣಿ ಗಳಿಗೆ ಬರಬಾ ರದು.
ಇನ್ನೊಂದು ಬಲಹೀನತೆ ತೋರಿಸುವ ಕ್ರತ್ಯ ಆತ್ಮಹತ್ಯೆ.
ಯುವಜನತೆ ಇ ಕೆಲಸಕ್ಕೆ ಶರಣಾಗುತ್ತಾರೆ.
ಆತ್ಮ ಶಕ್ತಿ ಕಳೆದು ಕೊಳ್ಳುವುದು ಹೇಡಿಯ ಲಕ್ಷಣವಲ್ಲವೇ ?
ಎಲ್ಲವನ್ನೂ ಎದುರಿಸುವ ಪುರುಷ ಲಕ್ಷಣವಿದ್ದಾಗ ನಾವು ಸಾಧಿಸುವ ಕೆಲಸಗಳು ಜೀವನದಲ್ಲಿ ತುಂಬಾ ಇವೆ .
ಉಪವಾಸ ವ್ರತ ಹಿಡಿಯುವ/ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಧನೆಯ ಬಗ್ಗೆ ಯೋಚಿಸಿ.
ಇದು ಕೇವಲ ಪತ್ರಿಕೆ ಮತ್ತು ಮಾಧ್ಯಮಗಳ ವಿಷಯವಾಗದೇ ನಿರೀಕ್ಷಿತ ಫಲ ನಿಡುವಂತಾಗಲಿ.
ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಕುಂದಾಪುರ ನಾಗೇಶ್ ಪೈ .
ಸತ್ಯ ಮೇವ ಜಯತೇ
ಜೈ ಭಾರತ್ .

Tuesday, June 21, 2011

ದೇವಸ್ಥಾನ ಗಳಲ್ಲಿ ರಾಜಕಾರಣಿಗಳ ಚರ್ಚೆ ಬೇಡ

ವ್ಯಕ್ತಿತ್ವ ವಿಕಾಸ ಮಾಲಿಕೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ
ದೇವಸ್ಥಾನ ಗಳನ್ನೂ ರಾಜಕೀಯಕ್ಕೆ ತರಬಾರದು .
ರಾಜಕೀಯದಲ್ಲಿ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಪದವಿಗಾಗಿ ಪಕ್ಷಗಳು ಒಬ್ಬರ ಮೇಲೆ ಇನ್ನೊಬ್ಬರು ಬೀಳುವ ಖುರ್ಚಿಗಾಗಿ ಹೊರಾಟ ನಿರಂತರವಾಗಿ ನಡೆದು ರಾಜ್ಯದ ಜನತೆಗೆ ಒಂದು ರೀತಿಯಲ್ಲಿ ಮೋಜು ಮತ್ತು ಬೇಸರವನ್ನು ಉಂಟು ಮಾಡಿದೆ .ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರು ಸ್ಥಳದ ಮಹಾತ್ಮೆ ಮತ್ತು ಪ್ರಮಾಣ ಮತ್ತು ಆಣೆಯ ಬಗ್ಗೆ ವಿವರಣೆ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿ ಗಳಿಗೆ ವಿವರ ಕೊಟ್ಟರು .
ಈಗ ಬರುವ ಭಾನುವಾರ ಇದು ನಡೆಯುವುದೇ ಕಾದು ನೋಡಬೇಕು .
ಇಂತಹ ಸನ್ನಿವೇಶ ರಾಜ್ಯದಲ್ಲಿ ಮುಂದೆ ಬರಬಾರದು .
ಪತ್ರಿಕೆ ಮತ್ತು ಮಾಧ್ಯಮಗಳ ಮುಖ ಪುಟಗಳಲ್ಲಿ ಬಂದು ಜನರ ಚರ್ಚೆಯ ವಸ್ತು .
ಇ ವಿಷಯದಲ್ಲಿ ತರಿಗೆ ಹಣ ಮತ್ತು ಸಮಯ ಕಳೆಯುವುದು ಸಮಂಜಸವಲ್ಲ.
ಅಭಿವ್ರದ್ಧಿ ಕೆಲಸ ಇರುವಾಗ ಪ್ರಜೆಗಳಿಂದ ಆರಿಸಿಕೊಂಡು ವಿಧಾನಸಭೆ ಪ್ರವೇಶ ಮಾಡಿ, ದೇವಸ್ಥಾನ ಗಳಲ್ಲಿ ಆಣೆ ಪ್ರಮಾಣ ಮಾಡುವ ಕಾರ್ಯಕ್ರಮ ವಿರೊಧಿಸಿ .
ಪ್ರತಿಜ್ನೆ ಸ್ವೀಕಾರ ಮಾಡಿದ ಮೇಲೆ ಆಡಳಿತ ಅವಧಿಯಲ್ಲಿ ಪುನಃ ಇದರ ಅವಶ್ಯಕತೆ ಬರುವುದಿಲ್ಲ .
ದೇವರ ಮುಂದೆ ಬೇಡುವ ಅಧಿಕಾರ ಮಾತ್ರ ಇದೆ .
ಕರ್ನಾಟಕ ರಾಜ್ಯ ಮತ್ತು ಜನತೆಯನ್ನು ದೇವರು ಕಾಪಾಡಲಿ ಎಂದು ಬೇಡಿಕೊಳೋಣ .
ಕುಂದಾಪುರ ನಾಗೇಶ್ ಪೈ .

Thursday, April 7, 2011

ಪುಟ್ಟಪರ್ತಿ ಸಾಯಿ ಬಾಬಾ ರು ಶೀಗ್ರ ಗುಣಮುಖ ರಾಗ ಲಿ

ಸಕ್ಕರೆ ಇರುವಲ್ಲಿ ಇರುವೆ ಮುತ್ತಿಗೆ ಸಹಜ ಅಲ್ಲವೇ ?
ಪದವಿಗಾಗಿ ಖುರ್ಚಿ ಆಶೆ ಬಯಸಿದ್ದಾರೆ .
ವ್ಯಕ್ತಿ ವಿಕಾಸ ಮಾಲಿಕೆ ಮುಂದಿನ ಭಾಗ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ದೇಶ /ವಿದೇಶಗಳ ಎಲ್ಲಾ ಭಕ್ತಾದಿಗಳು ಪುಟ್ಟಪರ್ತಿ ಸಾಯಿಬಾಬರ ಶೀಗ್ರ ಗುಣಮುಖರಾಗಲು ಪರಮಾತ್ಮನನ್ನು ದಿನನಿತ್ಯವೂ ಜಪಿಸುತ್ತದೆ .
ಪೂಜ್ಯ ಸಾಯಿ ಬಾಬಾ ಅವರಿಗೆ ಉತ್ತರಾಧಿಕಾರಿಗಳಿಲ್ಲ ,ಮರಣಾನಂತರ ಆಸ್ತಿ ಯಾರಿಗೆ ಸೇರಬೇಕೆಂದು ಉಲ್ಲೇಖಿಸಿಲ್ಲಾ .ಇದರ ಬಗ್ಗೆ ಧಾರ್ಮಿಕ ಜನರಲ್ಲಿ ತಳಮಳ .
ಇಷ್ಟು ದಿನ ನನಗೆ ಏನೂ ಬೇಡ ಎಲ್ಲವೂ ಅವನಿಗೆ ಎಂದು ಮಾತಾಡುವ ಭಕ್ತಾದಿಗಳು ಈಗ ಸೊತ್ತಿನ ಆಸ್ತಿ ಯ ಭಾಗ ದ ಚಿಂತನ ಮಂಥನ ನಡೆಸುತ್ತಿವೆ .ಸರಕಾರಗಳು ಯೋಚನೆ ಮಾಡಿದ್ದರು ಮಾಡಬಹುದು .
ಹೇಳಬಯಸುವುದು ಏನೆಂದರೆ ನಾವು ನಿಸ್ವಾರ್ಥಿಯಾಗಿ ಸಾಯಿ ಬಾಬರ ಸೇವೆ ಮಾಡುವಾಗ ಆಶೆ ಇಲ್ಲದೆ ಧ್ಯಾನ ಮಾಡಿ ಮುಕ್ತಿಮಾರ್ಗ ಕಾಯುತ್ತಿದ್ದೇನೆ ಎನ್ನುವ ಇ ಜನರು ಏಕೆ ಎದ್ದೇಳಬೇಕು .
ಮುಖ್ಯವಾಗಿ ಗುಣಮುಖರಾಗಿ ಪುನಃ ಆಶೀರ್ವಚನ ಕೊಡಲಿ ಎನ್ನುವ ಮನಸ್ಸು ಬೇಡವೇ
ಹೌದು ಇದೆ .ಸ್ವಲ್ಪ ಜನರು ಯೋಚಿಸುತ್ತಾರೆ ,ಇ ಜನರನ್ನು ನಾವೆಲ್ಲರೂ ಗವ್ರವಿಸೋಣ .
ಇರುವೆ ಸಕ್ಕರೆ ಸುತ್ತ ಸೇರಿದ ಹಾಗೇ ಜನ ಸೇರುತ್ತಾರೆ .
ಮುಖ್ಯ ಮಂತ್ರಿ ಸ್ಥಾನದ ಬಗ್ಗೆ ಪಕ್ಷದಲ್ಲಿ ಭಿನ್ನಮತ ಬಂದಿರುವುದು ರಾಜಕೀಯ ವಲಯದಲ್ಲಿ ಇದು ಎರಡನೇ ಸ್ವಾರ್ಥಿ ಮನೋಭಾವ .
ರಾಜ್ಯದ ೬.೧೫ ಕೋಟಿ ಜನ ಇ ವಿಷಯಗಳ ಬಗ್ಗೆ ಸ್ವಲ್ಪ ಚಿಂತಿಸಲಿ.
ಧಾರ್ಮಿಕತೆಯ ಮತ್ತು ಮುಕ್ತಿಯ ಬಗ್ಗೆ ಯಾವಾಗಲು ಚಿಂತನೆ ಮಾಡಿ ಆತ್ಮ ಪರಮಾತ್ಮನಲ್ಲಿ ಸೇರುವ ಬಯಕೆ ಇರುವಾಗ ಸಾಯಿ ಬಾಬರ ಸಾವಿರ ಕೋಟಿ ಆಸ್ತಿ ರಾಜ್ಯದ ಮುಖ್ಯಮಂತ್ರಿ ಖುರ್ಚಿಯ ಮೇಲೆ ಕಣ್ಣು ಇಡಬಾರದು .
ಇಲ್ಲವೇ ರಾಜ್ಯದ ಪ್ರಜೆಗಳ ಹಿತಾಸಕ್ತಿ ಗಮನಿಸಿ ಅಭಿವ್ರದ್ಧಿಗೆ ಶ್ರಮಿಸಲಿ .
ಪುನಃ ಸಾಯಿ ಬಾಬಾ ಟ್ರಸ್ಟ್ ನಿಂದ ಶಿಕ್ಷಣ ಅರೋಗ್ಯ ಕ್ಷೇತ್ರ ತುಂಬಾ ಮುಂದುವರಿದ ವಿಷಯ ನಾವೆಲ್ಲರೂ ಮರೆಯಬಾರದು.
ಶ್ರೀ ಶ್ರೀ ಸಾಯಿ ಬಾಬಾ ರು ಅತೀ ಶೀಗ್ರ ಗುಣಮುಖರಾಗಿ ನಮ್ಮೆಲ್ಲರನ್ನೂ ಬೋಧಿಸಲಿ ಎಂದು ಪ್ರಾರ್ಥಿಸುವ
ಕುಂದಾಪುರ ನಾಗೇಶ್ ಪೈ .
ನಿಸ್ವಾರ್ಥಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ.

Tuesday, January 26, 2010

ಕಡಲಿನ ಸ್ನೇಹಿತ ಮೀನು ಗಾರ ಗಣ ರಾಜ್ಯೋತ್ಸವ ಶುಭಾಶಯಗಳು

ಕರಾವಳಿ ಮೀನುಗಾರರು ಕಡಲಿನ ಸ್ನೇಹಿತರು -ವ್ಯಕ್ತಿತ್ವ ವಿಕಾಸ ಮಾಲಿಕೆ -೭ [ಸಂಗ್ರಹ ]
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ
ದೂರದ ತೀರವಸೇರುವುದೊಂದೇ ಬಾಳಿನ ಗುರಿಯಮ್ಮ .
ಇದು ಪ್ರಣಯರಾಜ ಶ್ರೀನಾಥ್ ,ಆರತಿ ,ಅಂಬರೀಶ್ ಮತ್ತು ಶಿವರಾಂ ನಟಿಸಿರುವ [ಶುಭಮಂಗಳ ]ಕನ್ನಡ ಚಲನ ಚಿತ್ರದ ಕವಿ ಬರೆದ ಸಾಲುಗಳು ರಾಜ್ಯದ ಜನತೆಗೆ ಕರಾವಳಿ ಕಡಲಿಗೂ ಮನುಷ್ಯನ ವ್ಯಕ್ತಿತ್ವಕ್ಕೂ ಅವನ ಪ್ರೇಮ ಗೆಳೆತನ ವನ್ನು ಸೂಚಿಸಿರುತ್ತಾನೆ . ಮಲೆಯಾಳಂ ಚಿತ್ರ ಚೆಮ್ಮೀನ್ ಸಹ ಕಡಲಿನ ಮೀನಿನ ಪ್ರೇಮದ ಭಾಷೆ ಬರೆಯುತ್ತಿದೆ .ಹೀಗೆ ಚಲನ ಚಿತ್ರಗಳಲ್ಲಿ ಕಡಲು ಮತ್ತು ಮನುಷ್ಯನಿಗಿರುವ ಸಂಭಂಧವನ್ನು ಹೊರಾಂಗಣ ದಲ್ಲಿ ಸುಂದರವಾಗಿ ಚಿತ್ರಿಕರಿಸಲಾಗಿದೆ .
ಮೀನುಗಾರ ಮುಂಜಾನೆ ಎದ್ದ ಬಳಿಕ ಬಲೆಯನ್ನು ಹೆಗಲ ಮೇಲೆ ಹೊತ್ತು ತನ್ನ ನಾಡದೋಣಿಯ ಕಡೆ ಧಾವಿಸುವ ಚಿತ್ರವನ್ನು ನೀವು ನೋಡಿರುತ್ತೀರಿ .
ಈಗಿನ ಸಾಫ್ಟ್ವೇರ್ ಉಧ್ಯೋಗಿಗಳು ಲ್ಯಾಪ್ಟಾಪ್ ಬ್ಯಾಗ್ ಹೆಗಲ ಮೇಲೆ ಹೋಲಿಸಬಹುದು .ಏಕೆಂದರೆ ಇಬ್ಬರೂ ಜೀವನೋಪಾಯ ,ಹಣ ಸಂಪಾದನೆ ದುಡಿಮೆ .
ಕಡಲಿನ ಜೊತೆ ಆಟ ಮಾರಕವೂ ಹೌದು .ನಿಸರ್ಗದ ಪ್ರಕೋಪಕ್ಕೆ ಬಿರುಗಾಳಿ ಬರುವಾಗ ದೋಣಿಗೆ ಹುಟ್ಟುವಾಗ ಅವರು ಸಂಕಷ್ಟಕ್ಕೆ ಒಳ ಪಡುತ್ತಾರೆ ಸಮುದ್ರದ ತೆರೆಗಳ ಏರು ಇಳಿತ ಎದುರಿಸುವಾಗ ಜೀವ ಹಾನಿ ಸಂಭವವಿದೆ .ಹೆಚ್ಚಿನ ವಿವರಗಳನ್ನು ಪತ್ರಿಕೆ /ಮಾಧ್ಯಮಓದಿ /ನೋಡಿರುತ್ತೀರಿ .ಇದು ಪ್ರಪಂಚದ ಎಲ್ಲಾಕರಾವಳಿ ಗಳ ಮೀನುಗಾರರ ಸಮಸ್ಯೆ .
ವಿಜ್ಞಾನ ಮುಂದುವರಿಯುವಾಗ ಸರಕಾರಗಳು /ಹವಾಮಾನ ಇಲಾಖೆ ಮೀನುಗಾರರ ಉಜ್ವಲ ಭವಿಷ್ಯಕ್ಕಾಗಿ ಸಹಾಯ ಮಾಡುತ್ತಿದೆ .
ಅದರೂ ಮೀನುಗಾರರು ಕಡಲನ್ನು ತಾಯಿಯಾಗಿ ಭಗವಂತನ ಸ್ಥಾನದಲ್ಲಿ ಪೂಜಿಸುತ್ತಾರೆ .ದೇವರನ್ನು ನಮಸ್ಕರಿಸಿ ದಿನದ ಶುಭಾರಂಭ .
ಕೋಳಿ ಸಾಕಣೆ,ಮೀನು ವ್ಯವಸಾಯ ,ಪ್ರಪಂಚದ ಅತೀಹೆಚ್ಚು ಧನ ಲಾಭ ಮತ್ತು ಮಾಂಸಹಾರಿ ಗಳ ನ್ನು ಅಕರ್ಷಿಸಿದೆ.
ರುಚಿಯಲ್ಲಿ ನದಿ ,ಕೆರೆ ಮತ್ತು ಸಮುದ್ರ ವಿಭಿನ್ನ .
ಕುಂದಾಪುರ ದಲ್ಲಿ ಖಾರ್ವಿ ಜನಾಂಗ ಮೀನುಗಾರರು .
ಕೆಲವರು ಮೋಜಿಗಾಗಿ ಮೀನು ಹಿಡಿಯಲು ಕೆರೆ ,ನದಿ ತೀರದಲ್ಲಿ ಗಟ್ಟಲೆ ನಿಶಬ್ದವಾಗಿ ಗಾಳ ಹಿಡಿದು ಗಾಳಕ್ಕೆ ಎರೆ ಹುಳು ಆಹಾರ ಸಿಕ್ಕಿಸಿ ಕಾಯುವ ದ್ರಶ್ಯ ಸರ್ವೇ ಸಾಮಾನ್ಯ .
ಕಡಲಿನ ಪ್ರೇಮಕ್ಕಾಗಿ ತಮ್ಮ ಜೀವ ತೆತ್ತ ಮೀನು ಗಾರರನ್ನು ನಿರ್ಲಕ್ಷಿಸ ಬೇಡಿ .
ಗಣ ರಾಜ್ಯೋತ್ಸವದ ಶುಭಾಶಯ ಗಳೊಂದಿಗೆ
ನಿಮ್ಮ ಭವ್ಯ ಭಾರತ ನವ ನಿರ್ಮಾಣ ವೇದಿಕೆ .
ನಮಸ್ಕಾರ .
ಕುಂದಾಪುರ ನಾಗೇಶ್ ಪೈ .
ಜೈ ಜವಾನ್ ಜೈ ಕಿಸಾನ್ .

Sunday, January 24, 2010

ಕಂಬಳ ಕರಾವಳಿ ರೈತರ ಒಂದು ಮನೋರಂಜನ್

ಕಂಬಳ ಇದು ಒಂದು ಕರಾವಳಿ ರೈತರ ಮನೋರಂಜನೆ ಮತ್ತು ಅಧಿಕ ಭತ್ತದ ಪಸ ಲಿಗೆ ಭಗವಂತನಲ್ಲಿ ಸಲ್ಲಿಸುವ ಹರಕೆಯಾಗಿದೆ
ಕರಾವಳಿ ಯಲ್ಲಿ ವಾಸಿಸುವ ರೈತರು ನಮ್ಮ ರಾಜ್ಯದ ಅನ್ನದಾತ .
ಇವರು ರಾಜ್ಯದಲ್ಲಿ ತೆಂಗು ,ಗೇರುಮತ್ಸ್ಯ ,ಭತ್ತಇತ್ಯಾದಿ ಕೃಷಿ ಯಿಂದ ರಾಜ್ಯದ ಜನತೆ ಗೆ ಆಹಾರ ಉತ್ಪಾದನೆಯಲ್ಲಿ ನೆರವಾಗುತ್ತಾರೆ .
ಮುಂಜಾನೆಯಿಂದ ಸಾಯಂಕಾಲ ದುಡಿಯುವಾಗ ರೈತರಿಗೆ ದಣಿವು ಆಗಿ ಸಂಪೂರ್ಣ ಮನೋರಂಜನೆಯ ಅಗತ್ಯ ವಿದೆ ..
ನ್ರತ್ಯ ,ಹಾಡು ಯಕ್ಷಗಾನ ,ತಾಳಮದ್ದಲೆ ,ಹೂವಿನ ಕೋಲು ,ಗೊಂಬೆಯಾಟ ಇತ್ಯಾದಿ ಸರಳ ಮಾಧ್ಯಮದಿಂದ ಸಾಮೂಹಿಕವಾಗಿ ಸೇರಿ ರಾತ್ರಿ ಕಳೆದು ಮಾರನೇ ದಿನದ ದುಡಿಮೆ ಗೆ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ .ಅ
ನನ್ನ ಚಿಕ್ಕಂದಿನಲ್ಲಿ ವಿಧ್ಯುತ್ ದೀಪದ ಬೆಳಕು ಕರಾವಳಿ ಜನರಿಗೆ ಇರಲಿಲ್ಲಾಸೀಮೆ ಎಣ್ಣೆ ,ಗಾಸ್ ಲೈಟ್ ನಲ್ಲಿ ಕಾರ್ಯ ಕ್ರಮ ಗಳು ನಡೆಯುತಿದ್ದವು
ಮೊದಲನೆಯದು ಯಕ್ಷಗಾನ .ಇಲ್ಲಿ ಜ್ಞಾನ ಪೀಟ ಪ್ರಶಸ್ತಿ ವಿಜೇತ ಕವಿ ಡಾಕೋಟ ಶಿವರಾಮ ಕಾರಂತರ ಹೆಸರು ಕೇಳದವರಿಲ್ಲ .ಸ್ವತಃ ಯಕ್ಷಗಾನ ಪಾತ್ರ ಧಾರಿಯಾಗಿ ನಟಿಸಿ ಕಲೆಯನ್ನು ಜನರಿಗೆ ಪರಿಚಯಿಸಿದ್ದಾರೆ .
ಕರಾವಳಿ ಜನತೆಗೆ ಕಲೆ ನೀರುಕುಡಿದಸ್ಟು ಸುಲಭ .ಇಲ್ಲಿ ಧರ್ಮಸ್ಥಳ ,ಸಾಲಿಗ್ರಾಮ ,ಪೆರ್ಡೂರುಮೇಳಗಳು ಪ್ರಮುಖವಾಗಿವೆ .
೨ ನೆಯ ದು ಹೂ ಕೋಲು ಇಲ್ಲಿ ಬಣ್ಣ ವಿಲ್ಲ ರಂಗ ಸ್ಥಳ ಕುಣಿತ ವಿಲ್ಲದೆ ಭಾಗವತರು ಪುರಾಣದ ಕೆಲವು ಭಾಗಗಳನ್ನು ಆರಿಸಿ ಸಾರ್ವಜನಿಕರಿಗೆ ಪರಿಚಯ ಮಾಡುತ್ತಾರೆ .ಪಾತ್ರ ಧಾರಿಗಳು ಇರುತ್ತಾರೆ .ಗದ್ದೆಯಲ್ಲಿ
೩ ನೆಯದು ಗೊಂಬೆಯಾಟ .ಇದು ಒಂದು ಯಕ್ಷಗಾನವೇ .ಆದರೆ ಮನುಷ್ಯರ ಬದಲು ಗೊಂಬೆ ಗಳು ಪೌರಾಣಿಕ ಪ್ರಸಂಗಗಳನ್ನು ಜನರ ಮುಂದಿಡುತ್ತಾರೆ .ಇಲ್ಲಿ ಭಾಗವತರು ಪ್ರಸಂಗ ಹೇಳುವಾಗ ಪುರಾಣ ದಲ್ಲಿ ಬರುವ ಪಾತ್ರಗಳನ್ನುಗೊಂಬೆಗಳು ಕುಣಿದು ತೋರಿಸುತ್ತಿವೆ .
ಈಗ ಕಂಬಳಗಳ ಬಗ್ಗೆ ತಿಳಿಯೋಣವೆ ?
ನೂರಾರು ವರ್ಷಗಳ ಇತಿಹಾಸ ಇರುವ ಕರ್ನಾಟಕ ಕರಾವಳಿ ರೈತರ ಪಂದ್ಯವಾಗಿದೆ .ಸಾಮಾನ್ಯವಾಗಿ ಮನುಷ್ಯರ ಓಟ ಮತ್ತು ಪಂದ್ಯದ ಬಗ್ಗೆ ನೀವೆಲ್ಲರೂ ಕೇಳಿದ್ದಿರಿ .ಆದರೆ ಇ ಕಂಬಳದಲ್ಲಿ ರೈತರು ಮತ್ತು ಕೋಣಗಳಜೊತೆಯಾದ ಪಾತ್ರವಿದೆ .ಸಾಮಾನ್ಯವಾಗಿ ನವೆಂಬರ್ ಮತ್ತು ಮಾರ್ಚ್ ನಡುವಿನ ಪಂದ್ಯವಾಗಿರುತ್ತದೆ.ಒಂದನೇ ಪಸಲು ತೆಗೆದ ನಂತರ ಗದ್ದೆಯ ಮಣ್ಣು ಹದ ಮಾಡಬೇಕಾಗುತ್ತದೆ ..ಮಳೆ ಬರುವುದರಿಂದ ಗದ್ದೆಯಲ್ಲಿ ಕೆಸರು ತುಂಬಿರುತ್ತದೆ ಹಲ ಓಡಿಸಲು ಕಷ್ಟಕರ .ರೈತನು ಕೋಣ ಸೇರಿ ಮಣ್ಣು ಭತ್ತದ ಬಿತ್ತನೆಗಾಗಿ ಒಂದು ಓಟದ ಸ್ಪರ್ದೆ ಇಟ್ಟಿರುತ್ತಾರೆ .೨ ಜೊತೆ ಕೋಣ ಇಬ್ಬರು ರೈತರು ಬಾರುಕೋಲಿನ ಸಹಾಯದಿಂದ ಎತ್ತನ್ನು ಒಡಿಸಿತಾವೂ ಓಡುತ್ತಾರೆ.ಪ್ರಥಮ ಜೋಡಿಗೆ ಬಹುಮಾನ ಘೋಷಿಸುತ್ತಾರೆ .
ಇಲ್ಲಿ ಕಂಬಳ ಸಮಿತಿ ರಚಿಸಿದ್ದಾರೆ .ಸಮಿತಿಯ ಕಡೆಯಿಂದ ೧೭ ಕಂಬಳಗಳುನಡೆಯಲಿವೆ .ವಂಡಾರ [[ ಕುಂದಾಪುರ ]ಕದ್ರಿ [ಮಂಗಳೂರು] ಕೆಲವು ರೈತರು ಒಳ್ಳೆಯ ಪಸಲು ಬಂದು ನಮ್ಮ ನಾಡಿಗೆಶುಭ ವಾಗಲಿ ಎಂದು ಭಗವಂತ ನಿಗೆ ಹರಕೆ ಹೊತ್ತು ಹರಕೆ ಪೂರೈಸುವ ಸಲುವಾಗಿ ಕಂಬಳ ಪಂದ್ಯದ ಏರ್ಪಾಡು ಮಾಡಿರುತ್ತಾರೆ .ಇತ್ತೀಚೆಗಿನ ದಿನಗಳಲ್ಲಿ ಬೆಟ್ಟಿಂಗ್ ಕೋಳಿ ,ಕುದುರೆಯಿಂದ ಕಂಬಳದ ಕೋಣಗಳ ಮೇಲೂ ಬಂದಿದೆ .
ಜನರು ಹುಚ್ಚರೋ ಜಾತ್ರೆ ,ಕಂಬಳ ಅಥವಾ ಕೈ ಯಲ್ಲಿ ಆಡುವ ಲಕ್ಷ್ಮಿ ಮಹಿಮೆಯೋ ತಿಳಿಯ ಲಾಗದು .
ಇದು ನಮ್ಮ ಭವ್ಯ
ಭಾರತದ ನವ ನಿರ್ಮಾಣ ವೇದಿಕೆಯ ಪ್ರಕಟಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ ಭಾಗ -೬ ನಮ್ಮ ಸುಂದರ ಕರಾವಳಿ ನೋಟ .
ಕುಂದಾಪುರನಾಗೇಶ್ ಪೈ
ಜೈ ಕರ್ನಾಟಕ ಮಾತೆ.