Wednesday, December 30, 2009

ಚಿತ್ರ ನಟ ಸಾಹಸ ಸಿಂಹ ಡಾ ವಿಷ್ಣು ವರ್ಧನ್ ವಿಧಿ ವಶ .

ಅಗಲಿದ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ ನೀಡಲಿ
ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನಿರ್ಗಮನದ ದುಖ ಸಾಂತ್ವನ ವಾಗುವಂತಾಗಲಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯಕೊಂಡಿ ಯೊಂದು ಕಳಚಿರುವ ದುಖ ರಾಜ್ಯದ ಜನತೆಯನ್ನು ಆವರಿಸಿದೆ .
ನಾಗೇಶ್ ಪೈ

Saturday, December 26, 2009

ಆಟಲ್ಜಿ ಜನ್ಮ ದಿನ ಶುಭಾಶಯಗಳು

ವಿರೋಧ ಪಕ್ಷದ ನಾಯಕ ನಾಗಿ ದೇಶದ ಯುವ ನಾಯಕ ರಿಗೆ ಮಾರ್ಗ ದರ್ಶನ ಕೊಟ್ಟು ಮತ್ತೆ ಭವ್ಯ ಭಾರತದ ಪ್ರಧಾನಿ ಪಟ್ಟವನ್ನು ಅಲಂಕರಿಸಿ ವಿಶ್ವದ ನಾಯಕರಿಗೆಲ್ಲಾ ಮಾದರಿಯಾಗಿ ದೇಶದ ಕೀರ್ತಿ ಪತಾಕೆ ಯನ್ನು ಅತಿ ಎತ್ತರ ದಲ್ಲಿ ಹಾರಿಸಿದ್ದಾರೆ.
ನಿಸ್ವಾರ್ಥ ಜೀವನ ನಡೆಸಿದ ಮುಖಂಡ ನಿಗೆ ಜನ್ಮ ದಿನದ ಶುಭಾಶಯಗಳು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನವ ವರುಷ ಹರ್ಷ ದಯಕವಾಗಲಿ .
ಜೈ ಹಿಂದ್

Wednesday, December 16, 2009

ಶಿಸ್ತಿನ ಜೀವನ ,ಮಾತಿನ ಪರಿಪಾಲನೆ ಸುಗಮ ಜೀವನಕ್ಕೇಹದಿ

ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ -೩ ಶಿಸ್ತು ,ಸಂಯಮ ನುಡಿದಂತೆ ನಡೆಯುವುದು ,ಕರ್ತವ್ಯ ನಿಸ್ಟೆ ,ಅರ್ಪಣೆ ಮನೋಭಾವ ಬಾಲ್ಯ ದಲ್ಲಿ ಶಾಲಾ /ಕಾಲೇಜ್ ನಲ್ಲಿ ತರಬೇತಿ ಹೊಂದಿ ಜೀವನ ದಲ್ಲಿ ಕರಗತ ಮಾಡಿಕೊಂಡರೆ ಅದರ ಸಂಪೂರ್ಣ ಲಾಭ ವಿಮಾಯೋಜನೆ ಹಾಗೇಕೊನೆ ತನಕ ನಿವತ್ತಿ ವೇತನ ದ ರೂಪದಲ್ಲಿ ಸಿಗುವುದು .ಉದಾಹರಣೆ :ನಾನು ನೀಲಗಿರಿ ಜಿಲ್ಲೆಯಲ್ಲಿ ಬ್ಯಾಂಕ್ ಉಧ್ಯೋಗದಲ್ಲಿ ಇರುವಾಗ ದಿವಂಗತ ಫೀಲ್ಡ್ ಮಾರ್ಷ ಲ್ ಮಾಣೆಕ್ ಷಃ ಅವರನ್ನು ಭೇಟಿ ಮಾಡುವ ಸಂಧರ್ಭ ಸಮಯ ಮುಂಜಾನೆ ೧೦.೩೦ .ನಾವು ೧೦ ಘಂಟೆ ಯಲ್ಲಿ ಅವರ ಭೇಟಿಯ ಬಾಲ್ಕನಿ ಯಲ್ಲಿ ಕಾಯುತ್ತಿದ್ದೆವು .ಸಮಯ ೧೦.೩೦ಕ್ಕೆ ಸರಿಯಾಗಿ ಅವರು ಭೇಟಿಯ ಪೂರ್ಣ ಸಮ ವಸ್ತ್ರ ದಲ್ಲಿ ಕಾಣಿಸಿ ವಿನಯತೆಯಿಂದ ನಮ್ಮನ್ನು ಮಾತನಾಡಿಸಿದರು. ನಾವು ಗಮನಿಸಬೇಕಾದ ವಿಷಯ ಸಮಯ ಪ್ರಜ್ನೆ .ರೈಲ್ವೆ /ವಿಮಾನದಲ್ಲಿ ಪ್ರಯಾಣಿಸುವವರು ಸಮಯ ತಪ್ಪಿದರೆ ಎಷ್ಟು ತೊಂದರೆಗೆ ಒಳಗಾಗುತ್ತಿರಿಎನ್ನುವ ಬಗ್ಗೆ ನಿಮಗೆ ತಿಳಿದಿದೆ .ನಾಳೆ ಮಾಡುವ ಎಲ್ಲಾಕೆಲಸಗಳನ್ನು ಇಂದು ಯೋಜನೆ ಹಾಕಿ ಪೂರ್ವ ತಯ್ಯಾರಿ ಮಾಡಿ ಕೊಂಡಾಗಗಾಬರಿ ಆಗುವ ಪ್ರಮೇಯ ಬರುವದಿಲ್ಲ .ಕೆಲಸದ ಒತ್ತಡ ,ಸಮಯದ ಅಭಾವ ಇದ್ದರೂ ಯೋಜನೆ ಹಾಕಿದರೆ ಸುಸೂತ್ರ ವಾಗಿ ನಡೆಯುವುದರಲ್ಲಿ ಏನೂ ಸಂಧೇಹವಿರಲಾರದು .ಗುರುತಿನ ಕಾರ್ಡ್ ,ಕನ್ನಡಕ ,ಫೋನ್ ಕಾರಿನ ಕೀಲಿ ಇತ್ಯಾದಿ ಮರೆಯದೆ ಕಚೇರಿ ಯನ್ನು ಸಮಯದಲ್ಲಿ ತಲುಪಿದಾಗ ದಿನದ ಕೆಲಸದಲ್ಲಿ ತ್ರಪ್ತಿ ಸಿಗುತ್ತದೆ ತಿಂಗಳ ಕೊನೆಯಲ್ಲಿ ಸಂಭಳಸಿಗುವುದು .ಅಡಿಗೆ ಮನೆಯಲ್ಲಿ ಟೀ/ಕಾಫಿ ಮಾಡುವಾಗ ಸಕ್ಕರೆ ಬದಲು ಉಪ್ಪು ಹಾಕಿ ರುಚಿ ಕೆಡಿಸಿದ ಘಟನೆ ಕೇಳಿರಬಹುದು .ಯಾವ ಪದಾರ್ಥ ಎಲ್ಲಿ ಇಡಬೇಕು ಎಂದು ನಿರ್ಧರಿಸಿದಾಗ ಹುಡುಕುವ ಕೆಲಸವಿಲ್ಲ ಮತ್ತು ತಪ್ಪಾಗಲಾರದು .ವರ್ಕ್ ಟುಪ್ಲಾನ್ ಪ್ಲಾನ್ ಟು ವರ್ಕ್ [ಕೆಲಸ ಮಾಡುವಾಗ ಯೋಜನೆ ,ಯೋಜನೆಯಂತೆ ಕೆಲಸ ] ಸುಲಭ ಮತ್ತು ಸಂತೋಷ ,ನೆಮ್ಮದಿಯ ಜೀವನಕ್ಕೆ ಹಾದಿ.ಇ ದಾರಿಯಲ್ಲಿ ನಡೆದವರು ಜೀವನ ಪೂರ್ತಿ ಅರೋಗ್ಯ ,ಮನಸ್ಸು ಚೆನ್ನಾಗಿ ಇಟ್ಟುಅಧಿಕ ವರ್ಷ ಬಾಳಿ ಬದುಕುವುದು ಮಾತ್ರವಲ್ಲದೆ ಕುಟುಂಬದ ಎಲ್ಲಾ ಸದಸ್ಯರನ್ನು ಚೆನ್ನಾಗಿ ಸಂತೋಷ ವಾಗಿ ನೋಡಿಕೊಳ್ಳುತ್ತಾರೆ
ನೀವು ಪುಣ್ಯಕೋಟಿ ಗೋವಿನ ನಾಟಕ ನೋಡಿರಬಹುದು ಅಥವಾ ಹಾಡು ಮಾಧ್ಯಮ/ಪುಸ್ತಕ ಗಳಲ್ಲಿ ಓದಿರಬಹುದು .
ಸಂದೇಶ ಮಾತಿನಂತೆ ನಡೆದುಕೊಳ್ಳಬೇಕು ಇದು ಪ್ರತಿಯೊಬ್ಬ ಮನುಷ್ಯ ಜಾತಿ /ಸಮಾಜ ಮತ್ತು ಸರಕಾರಕ್ಕೆ ಅನ್ವಯ ವಾಗುವುದು .
ಉಧ್ಯೋಗ ದಲ್ಲಿ ಅರ್ಪಣೆ ,ನಿಸ್ಟೆ ಮನೋಭಾವ ಇರುವವರಿಗೆ ಯಶಸ್ಸು ಖಂಡಿತ .
ಇದು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್

Monday, December 14, 2009

ವ್ಯಕ್ತಿತ್ವ ವಿಕಾಸ -ಭಾಗ -೨ ಪಾಕ ಶಾಲೆ

ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ ಭಾಗ -೨
ಪುರುಷರು ಮತ್ತು ಸ್ತ್ರೀ ಯರು ಸಮಾಜದಲ್ಲಿ ಸಮಾನ .ಪಾಕ ಶಾಲೆ ಮತ್ತು ಅಡುಗೆ ಮಾಡುವುದರಲ್ಲಿ ಪ್ರವೀಣರು . ೪೦ ವರುಷ ಹಿಂದೆ ನೋಡಿದಾಗ ವರನು ವಧುವನ್ನು ನೋಡಲು ಬಂದಾಗ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ೧ ಅಡುಗೆ ಮಾಡುವುದು ,ಭಜನೆ ,ಸಂಗೀತ ನೃತ್ಯ ಗ್ರಹಸ್ತಿ,ನೋಡಲು ಸುಂದರಳಾಗಿರಬೇಕು ಇತ್ಯಾದಿ ಸಾಮಾನ್ಯವಾಗಿ ಪುರುಷನು ಒಳ್ಳೆಯ ಉಧ್ಯೋಗದಲ್ಲಿ ಇರಬೇಕು ,ನೋಡಲು ಸುಂದರ ,ಆರೋಗ್ಯವಂತ ಮತ್ತು ಕುಟುಂಬ ಜವಾಬ್ದಾರಿ ಹೋರಲು ಸಮರ್ಥ ನಾಗಿರಬೇಕು .ಗಂಡು ಹೆಣ್ಣು ಸಂಖ್ಯೆ ಗಿಂತ ಕಡಿಮೆ ಪ್ರಮಾಣ ಇದರಿಂದಾಗಿ ಗಂಡು ಹುಡುಕುವುದು ಹೆತ್ತವರಿಗೆ ತುಂಬಾ ಕಷ್ಟ .ಈಗ ಸಮಯ ಬದಲಾಗಿ ವಧುವು ವರನನ್ನು ಆರಿಸಲು ಕೇಳುವ ಪ್ರಶ್ನೆ ,ವಾಹನ ಗಳಲ್ಲಿ ಓಡಾಟ ,ಚಲನ ಚಿತ್ರ ನೋಡುವುದು ,ಶ್ರಿಂಗಾರ್ರಬೇಕು ,ಹೊಸ ಬಟ್ಟೆ ,ಮನೆ ,ಆಭರಣ ಮಾಡುವ ಸಾಮರ್ಥ್ಯ ,ಸಂಪಾದನೆ ,ಹೋಟೆಲ್ ಊಟ ಇರಬೇಕು .ಇದಕ್ಕೆ ಮುಖ್ಯ ಕಾರಣ ಪುರುಷನಿಗೆ ಸಮನಾಗಿ ಹಣ ಸಂಪಾದನೆ .ಕುಟುಂಬ ಸಮಪಾಲು ಜವಾಬ್ದಾರಿ .ಈಗ ಹೆಣ್ಣು ಸಂಖ್ಯೆ ಭ್ರೂಣ ನಾಶ ದಿಂದಾಗಿ ಕಡಿಮೆ ಯಾಗಿದೆ .ಸರಕಾರ ಎಚ್ಚೆತ್ತಿದೆ .ಅದರೂ ಪ್ರೇಮ ವಿವಾಹ ಕೂಡ ಜಾರಿಯಲ್ಲಿ ಇದೆ.
ಇಂದಿನ ಮುಖ್ಯ ವಿಷಯ ಅಡುಗೆ ಮಾಡುವುದು ಮಾಧ್ಯಮಗಳಲ್ಲಿ ಸಂಜೀವ್ ಕಪೂರ್ ಇನ್ನೂ ಕೆಲವು ಪುರುಷರು ಅಡುಗೆ ಮಾಡಿವಿಶ್ವ ಪ್ರಖ್ಯಾತಿ ಯಾಗಿದ್ದಾರೆ .ಪುರಾಣ ,ಚರಿತ್ರೆ ಪುಟ ಗಳಲ್ಲಿ ನಳ ಮಹಾರಾಜ ಪಾಂಡವರು ಕಥೆ ಓದಿರ ಬಹುದು .
ಅಡಿಗೆ ನಿಪುಣ ರಾಗುವುದು ಅಸ್ಟುಸುಲಭವಲ್ಲ .ತಾಳ್ಮೆ ,ಸಮಾಧಾನ ,ಅನುಭವ ಬೇಕಾಗಿದೆ ಗಂಡ ಮತ್ತು ಹೆಂಡತಿ ಬೇರೆ ಬೇರೆ ಜಾಗದಲ್ಲಿ ಕುಟುಂಬ ನಡೆಸಬೇಕಾದ ಪ್ರಸಂಗದಲ್ಲಿ ಪಾಕ ಶಾಲೆ ಅನುಭವ ಸಹಾಯಕಾರಿ
ಬೆಳಿಗ್ಗೆ ಟಿವಿ ನೋಡು ವಾಗ ಎಲ್ಲಾ ಚಾನೆಲ್ ಗಳಲ್ಲಿ ಗ್ರಹಿಣಿಯರು,ಅಡುಗೆ ಮತ್ತು ಸೌಂದರ್ಯ ವರ್ಧನೆ ವಿಭಾಗ ನೋಡಬಹುದು ಮಾತ್ರವಲ್ಲದೆ ಅಂತರ್ಜಾಲದಲ್ಲಿ ಲಭ್ಯ
ಗಂಡಸರು ಹೆಂಗಸರು ಎನ್ನುವ ಭೇಧ ಭಾವ ಇಲ್ಲದೆ ಇ ಕಲೆ ಬೆಳೆಸುವುದು ಉಚಿತ .
ಜ್ಞಾನ ಭಂಡಾರ ಬೆಳೆಯಲಿ ಆದರ್ಶ ಕುಟುಂಬ ನಡೆಸಲು ಮಾದರಿಯಾಗಲಿ .
ಮದುವೆ ಯಾಗದ ಯುವ ಜನರಿಗೂ ಇದು ಬಹು ಉಪಯೋಗಿ .
ಆದರ್ಶ ಸಮಾಜಕ್ಕೆ ನಾಂದಿಯಾಗಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .

Tuesday, December 8, 2009

ತ್ಯಾಗ ,ಬಲಿದಾನದ ಪ್ರವ್ರತ್ತಿ ಬೆಳೆಯಲಿ

ವ್ಯಕ್ತಿತ್ವ ವಿಕಾಸ -ಭಾಗ -೧ [ಸಂಗ್ರಹಿಸಿರುವುದು ]
ಚರಿತ್ರೆ ಅಂತರ್ಜಾಲದಲ್ಲಿ ಲಭ್ಯ
ಬ್ರೀಟಿಶರೆ ಭಾರತ ಬಿಟ್ಟು ತೊಲಗಿರಿ ಎನ್ನುವ ಕೂಗು ನಮ್ಮ ದೇಶದ ಮೂಲೆ ಮೂಲೆ ಯಿಂದ ಕೇಳಿ ಬರುತ್ತಿತ್ತು . ಅಂದಿನ ಯುವಕರು ಸರ್ವ ತ್ಯಾಗ ,ಬಲಿದಾನದ ಭಾವನೆ ಯಿಂದ ಸರ್ವ ಜಾತಿ /ಧರ್ಮ ಮತ್ತು ಹೆಣ್ಣು ಗಂಡು ಲೆಕ್ಕಿಸದೆ ಗುರಿಯೊಂದೆ ಕೇವಲ ಭಾರತಕ್ಕೆ ಸ್ವಾತಂತ್ರ್ಯ ಬೇಕು .ವಯಸ್ಸನ್ನು ನೋಡದೆ ಸಂಗ್ರಾಮ ದಲ್ಲಿ ಧುಮುಕಿದರು .ಅದರ ಫಲ ವಾಗಿ ಸಿಕ್ಕಿದ ಸ್ವಾತಂತ್ರ್ಯಕ್ಕೆ ೬೨ ವರುಷ ಕಳೆದವು .ಆ ಸಮಯದಲ್ಲಿ ಎಲ್ಲಾ ಭಾಷೆ ಮಾತನಾಡುವವರು ಒಂದಾಗಿದ್ದರು .
ಹಣ ,ಸ್ಥಾನ ಪದವಿಗಾಗಿ ಹಾತೊರೆಯದೆ ಜಪಿಸುವ ಮಂತ್ರ ಒಂದೇ 'ನಮಗೆ ಸ್ವಾತಂತ್ರ್ಯ ಬೇಕು ' ಇಲ್ಲಿ ಇರುವ ಮನೋಭಾವನೆಯನ್ನು ಇಂದಿನ ಯುವಕರು ದಯವಿಟ್ಟು ಗಮನಿಸಿ .
ಆದರೆ ಚುನಾವಣೆ ಬಂತು ಆಕ್ಷಣವೇ ಹಣದ ಪ್ರಭಾವ ಶುರು .ಇಲ್ಲಿ ಯಾವ ಪಕ್ಷ ಮುಖ್ಯವಲ್ಲ .ವೀಡಿಯೊ ಚಿತ್ರಣ ನೀವು ಇ ಮೊದಲು ನೋಡಿರ ಬಹುದು .ಪುನರಾವರ್ತನೆ ಆಗುವುದು ನಿಜ.
ವ್ಯಕ್ತಿತ್ವ ವಿಕಾಸದಲ್ಲಿ ಸಭ್ಯತೆ ನಾಗರೀಕತೆ ಬಹು ಮುಖ್ಯ .ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ನಡೆದುಕೊಳ್ಳುವ ರೀತಿಯನ್ನು ಇಲ್ಲಿ ಬರೆಯುವುದು ನನಗೆ ಸರಿ ಎಂದು ಕಾಣಿಸಲಾರದು .ಏಕೆಂದರೆ ಮಾಧ್ಯಮ ಗಳು ಚಿತ್ರೀಕರಣ ಮಾಡಿ ಜನರ ಮುಂದೆ ಇಡುತ್ತಾರೆ .
ಸಭ್ಯತೆ ,ತ್ಯಾಗ ಮತ್ತು ಬಲಿದಾನದ ಪಾಟ ಎಲ್ಲಿ ಹೋಗಿದೆ .ಕೇವಲ ಚರಿತ್ರೆ ಪುಸ್ತಕ ಖರಿದಿಸಿ ಓದಿದಾಗ ಸಿಗಬಹುದು .ಈಗಿನ ಯುವಜನತೆ ಭವ್ಯ ಭಾರತ ನಿರ್ಮಾಣ ಮಾಡಬಲ್ಲರೆ .ಅಥವಾ ಕುಟುಂಬ ರಾಜಕಾರಣ ಮಾಡುತ್ತ ಮುಖ್ಯಮಂತ್ರಿ /ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ ಸ್ಥಾನಕ್ಕಾಗಿ ಹಂಬಲಿಸುತ್ತ ಪ್ರಜೆ ಗಳ ಹಿತ ವನ್ನು ಮಣ್ಣು ಮಾಡುತ್ತಾರೆಯೇ ಎನ್ನುವ ಪ್ರಶ್ನ್ನೆ ಉಧ್ಭವ ವಾಗುವುದು ಸಹಜ .
ಒಳ್ಳೆಯದನ್ನೇ ಬಯಸುವ ನಾವು ಆಶಾವಾದಿಗಳು.
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್

Sunday, December 6, 2009

ಯುವ ಜನಾಂಗ ಮತ್ತು ವ್ಯಕ್ತಿತ್ವ ವಿಕಾಸ ,ತರಬೇತಿ ಯೋಜನೆ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯುವ ಜನಾಂಗದ ವ್ಯಕ್ತಿತ್ವ ವಿಕಾಸದ ಬಗ್ಗೆ ಪರಿಣಿತ ಮತ್ತು ತರಬೇತು ಹೊಂದಿರುವ ಪ್ರಮುಖ ಮಹಾನುಭಾವರಿಂದ ಲೇಖನಗಳನ್ನು ಇ ವೇದಿಕೆಯಲ್ಲಿ ಪ್ರಕಟಿಸಲು ಕೋರಲಾಗಿದೆ .ಇದು ಮುಂದಿನ ಪೀಳಿಗೆಗೆ ಸಹಾಯಕಾರಿ ಯಾಗುವುದು ಮಾತ್ರವಲ್ಲದೇ ಭವ್ಯ ಭಾರತದ ನಿರ್ಮಾಣವಾಗುವುದು .ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಭಾರತ -೨೦೧೫ ರ ಕಲ್ಪನೆ ಸಾಕಾರ ವಾಗಬೇಕು .
ನಮಸ್ಕಾರ ನಾಳೆಯ ಸಂಚಿಕೆ ಓದಿ ಮತ್ತು ನಿಮ್ಮ ಅಭಿಪ್ರಾಯ ಬರೆಯಿರಿ .
ಜೈ ಭಾರತ್
ನಾಗೇಶ್ ಪೈ

Tuesday, December 1, 2009

ವಾರಾಂತ್ಯ ಕುಟುಂಬ ಸದಸ್ಯರ ಜೊತೆ ಮಿಲನದ ಅವಶ್ಯಕತೆ

ಈಗಿನ ಯಾಂತ್ರಿಕ ಯುಗದಲ್ಲಿ ಕುಟುಂಬ ಸದಸ್ಯರು ಮತ್ತು ಸಮಾಜ ಭಂಧುಗಳುಈಗ ವಾರಕ್ಕೊಮ್ಮೆ ಯಾದರೂ ಒಂದು ಕಡೆ ಸೇರಿ ತಮ್ಮ ಕುಟುಂಬದ /ಸಮಾಜದ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಈಗ ನಮಗೆ ಇದೆ .ತಿಂಗಳಿಗೊಮ್ಮೆ ಸತ್ಯ ನಾರಾಯಣ ಪೂಜೆ ಮಾಡುವ ಸಂಪ್ರದಾಯ ಕೆಲವು ಅಮಾಜ ಗಳಲ್ಲಿ ಇವೆ .ಪೂಜೆಯ ನಂತರ ಊಟದ ವ್ಯವಸ್ಥೆ ಮಾಡಿರುತ್ತಾರೆ .ಮಕ್ಕಳಿಗೆ ಕೂಡ ಬೇರೆ ಮಕ್ಕಳ ಜೊತೆ ಆಟವಾಡಿ ಸಮಯ ಕಳೆದು ಒಂದು ರೀತಿಯಲ್ಲಿ ಬದಲಾವಣೆ ಸಿಗುತ್ತದೆ .ಪ್ರಮುಖ ವ್ಯಕ್ತಿ ಗಳನ್ನೂ ಸನ್ಮಾನ ಮಾಡವ ಪದ್ಧತಿ ಯನ್ನು ಇಟ್ಟಿರುತ್ತಾರೆ ಊಟ ದ ಜೊತೆ ಸಂಗೀತ ,ಯೋಗ ,ಶ್ಲೋಕ ,ಭಜನೆ ಇತ್ಯಾದಿ ವಿಷಯ ಗಳ ಬಗ್ಗೆ ಆಸಕ್ತಿ ತೋರಿಸುತ್ತಾರೆ
ಎಲ್ಲಾಧರ್ಮ ಗಳಲ್ಲಿ ಇದನ್ನು ಬೆಳಸಿ ಕೊಂಡು ಬಂದಿರುತ್ತಾರೆ .
ಸಮಾಜದ ಬೆಳವಣಿಗೆ ಬಗ್ಗೆ ಮುಂದುವರಿಸಲು ಇಂತಹ ಕೂಟದ ಅವಶ್ಯಕತೆ ನಮಗೆ ಈಗ ಇದೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .