Friday, January 15, 2010

ಪ್ರವಾಸಿಗರ ತಾಣ ವಿಶ್ವದಲ್ಲಿ ೪ ನೇ ಸ್ಥಾನ ನಮ್ಮ ಸುಂದರ ಮೈಸೂರು

ವಿಶ್ವದ ಪ್ರಮುಖ ೩೧ ಪ್ರವಾಸಿಗರ ತಾಣ ದ ಪಟ್ಟಿಯನ್ನು ಅಮೇರಿಕಾದ ಪ್ರಸಿದ್ಧದ ಪತ್ರಿಕೆ ನ್ಯೂ ಯಾರ್ಕ್ ಟೈಮ್ ಸ ಸುರ್ವೆ ಮಾಡಿ ಪ್ರಕಟಿಸಿರುವುದನ್ನು
ನಮ್ಮ ಸುಂದರ ಮೈಸೂರಿನ ಸಂಜೆ ಅಂಗ್ಲ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಕರ್ನಾಟಕ ರಾಜ್ಯದ ಹಾಗೂ ಅಂತರ್ಜಾಲದಲ್ಲಿ ಓದುವ ವಿಶ್ವದ ಎಲ್ಲಾ ಮಿತ್ರರಿಗೆ
ಸಂತಸದ ಸುದ್ಧಿ ತಿಳಿಸಿದೆ .ಪಟ್ಟಿಯಲ್ಲಿ ೪ ನೇ ಸ್ಥಾನ ದಲ್ಲಿ ನಮ್ಮ ಸುಂದರ ಮೈಸೂರನ್ನು ಕಾಣ ಬಹುದು .ಇನ್ನೊಂದು ಗರಿ ಮೈಸೂರ್ ನಗರ ಕಿರೀಟಕ್ಕೆ ಸೇರಿದೆ .
ಮುಖ್ಯವಾಗಿ ಮಹಾರಾಜರ ಅರಮನೆ,ಜಯ ಚಾಮರಾಜೇಂದ್ರ ಮ್ರಗಾಲಯ,ಬ್ರಂದಾವನ,ಬೆಟ್ಟದ ಮೇಲೆ ನೆಲಸಿರುವ ತಾಯಿ ಚಾಮುಂಡೇಶ್ವರಿ ದೇವಿ ಮಂದಿರ
ಸ್ಟಾರ್ ಹೋಟೆಲ್ ಗಳು ಪ್ರವಾಸಿಗರನ್ನು ಆಕರ್ಷಿಸಿ ಇ ಕೀರ್ತಿ ಯನ್ನು ತಂದಿದೆ .ಲಂಡನ್ ನ ಮೇಣದ ಮ್ಯುಸಿಯುಂ ನ ನಂತರ ದ್ವಿತೀಯ ಸ್ಥಾನ ಪಡೆದಿದೆ .
ಮೈಸೂರ್ ರಾಜರ ಕಾಲದಲ್ಲಿ ರಾಜಧಾನಿ ಯಾಗಿರುವ ನಗರ ದಸರೆ ಯಿಂದ ಆಗ್ರಾದ ತಾಜ್ ಮಹಲ್ ಸಂದರ್ಶಿಸುವ ಪ್ರವಾಸಿಗರ ಸಂಖ್ಯೆಯನ್ನು ಮಿರಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ .
ಎಲ್ಲಾ ರಾಜಕೀಯ ಪಕ್ಷಗಳು ನಾಡಿನ ಜನತೆ ಸೇರಿ ದುಡಿದಾಗ ಇನ್ನೂ ಹೆಚ್ಚಿನ ಕೀರ್ತಿ ಪಡೆದು ಮೊದಲನೇ ಸ್ಥಾನಕ್ಕಾಗಿ ಬಯಸಬಹುದು .ವಿಮಾನ ,ರೈಲ್ವೆ ಮತ್ತು ಬಸ್ ಸೌಕರ್ಯ ನೈಸ್ ವಿವಾದ ಮುಗಿದು ಮೈಸೂರಿನ ತನಕ ರಸ್ತೆ ಜೋಡಣೆ .
ವಾಹನಗಳ ನಿಲುಗಡೆ ವ್ಯವಸ್ತೆ ,ನೀರು,ವಿಧ್ಯುತ್ ಮತ್ತು ಪ್ರವಾಸಿಗರಿಗೆ ನಿಲ್ಲಲು ಸೌಕರ್ಯ ಸರಿಯಾದ ಅನುಕೂಲಕರ ವಾತಾವರಣ ಬೇಕು .ಅತಿಥಿ ದೇವೋ ಭವ,ಹೆಣ್ಣು ಮಕ್ಕಳಿಗೆ ಗೌರವ ಚಿಕ್ಕ ವರಿಗೆ ಆಟದ ಮನೋರಂಜನೆ ನೀಡಬೇಕು .
ಕನ್ನಡ ನಾಡಿಗೆ ಸಿಕ್ಕಿರುವ ಇ ಸ್ಥಾನ ಹೆಮ್ಮೆಯ ವಿಷಯ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ಇದು ನಮ್ಮ ಸುಂದರ ಮೈಸೂರು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ

Wednesday, January 13, 2010

ರಾಜಕಾರಿಣಿಗಳೇ ನಿಮ್ಮ ನಾಲಿಗೆ ಮೇಲೆ ಹತೋಟಿ ಇರಲಿ

ಎಳ್ಳು ,ಬೆಲ್ಲ ತಿಂದು ಕಹಿ ಎಲ್ಲಾ ಮರೆತು ಒಳ್ಳೆಯ ಮಾತನಾಡುವ ಸಂಸ್ಕೃತಿ ಬೆಳೆಸಿ ಕೊಂಡುಸುಖವಾಗಿ
ಸಂಕ್ರಾಂತಿ ಹಬ್ಬ ಆಚರಿಸಿ .ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಿ .ಯುವ ಜನತೆ ಭವ್ಯ ಭಾರತದ ನವ ನಿರ್ಮಾಣದಲ್ಲಿ ಬೆನ್ನೆಲುಬು ಆಗಿರುವುದರಿಂದ ಮಾತಿನಲ್ಲಿ ಮತ್ತು ಬರಹದಲ್ಲಿ ನಿಯಂತ್ರಣ ಕಳೆದು ಕೊಳ್ಳ ಬಾರದು.ಚಾರಿತ್ರ್ಯ ವಧೆಯಾಗಿ ಜೀವನದ ಉದ್ಧಕ್ಕೂ ಇದು ಪರಿಣಾಮ ಬಿರ ಬಹುದು .ಮಾತು ಮಾಣಿಕ್ಯ .ಬತ್ತಳಿಕೆಯಿಂದ ಬಿಟ್ಟ ಬಾಣ ,ಚೆಲ್ಲಿದ ಹಾಲು ,ನಾಲಿಗೆಯಿಂದ ಹೊರ ಬಿದ್ದ ಅಸಂವಿಧಾನ ಶಬ್ದ ಪುನಃ ಪಡೆಯಲು ಸಾಧ್ಯವಿಲ್ಲ .
ಸಂಕ್ರಾಂತಿ ಶುಭಾಶಯಗಳು .
ನಾಗೇಶ್ ಪೈ .

Thursday, January 7, 2010

ಭಜನೆ ಯೊಂದು ಭಗವಂತನನ್ನು ಸಮಿಪಿಸುವ ಮಾರ್ಗ ವಾಗಿದೆ

ಹರಿ ನಾಮ ಸಂಕೀರ್ತನೆ ಭಜನೆ ಭಗವಂತ ನನ್ನು ಮೆಚ್ಚಿಸಿಸಮಿಪಿಸುವ ಅತ್ಯಂತ ಸುಲಭ ಮಾರ್ಗ ವಾಗಿದೆ .ನಟ ಸಾರ್ವಭೌಮ ವರ ನಟ ಡಾ ರಾಜ್ ಕುಮಾರ್ ನಟಿಸಿರುವ ಚಲನ ಚಿತ್ರ ಭಕ್ತ ಕುಂಬಾರ ದಲ್ಲಿ ಇದನ್ನು ಜನತೆಯ ಮನ ಸೂರೆಗೊಳ್ಳುವ ರೀತಿಯಲ್ಲಿ ನಿರ್ದೇಶಕರು ಚಿತ್ರಿಸಿರುವುದನ್ನು ನೀವೆಲ್ಲರೂ ಕಂಡು ಸಂಗೀತದ ಸವಿ ಯನ್ನು ಅನುಭವಿಸಿದ್ದಿರಿ .
ಮುಖ್ಯವಾಗಿ ಮಹಾರಾಷ್ಟ್ರ ದಲ್ಲಿ ಮರಾಟಿ ,ಕರ್ನಾಟಕ ದಲ್ಲಿ ಕನ್ನಡ ಭಾಷೆಯಲ್ಲಿ ಅಭಂಗ ಗಳನ್ನೂ ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿ ಯವರ ದ್ವನಿ ಸುರುಳಿ ಕೇಳಿ ಅನಂದಿಸಿರುವುದನ್ನು ಇಲ್ಲಿ ಸ್ಮರಿಸಬಹುದು .
ಕೇಂದ್ರ ಬಿಂದುವಾದ ಪಂಢರಾಪುರ ಪಾಂಡುರಂಗನು ಭಕ್ತ ರನ್ನು ಸದಾ ರಕ್ಷಣೆ ಕೊಡುತ್ತಾನೆ .ಪಶ್ಚಿಮ ಕರಾವಳಿಯ ಗೌಡ ಸಾರಸ್ವತ ಸಮಾಜದ ಜನರ ಮನೆ ಯಲ್ಲಿ /ದೇವಸ್ತಾನ ಗಳಲ್ಲಿ ಇಂದಿಗೂ ರಾತ್ರಿ ಭೋಜನದ ಮೊದಲು ಭಜನೆ ಮಾಡುವ ಸಂಪ್ರದಾಯಯೊಂದಿಗೆ ಬೆಳೆಸಿ ಕೊಂಡು ಬಂದಿರುತ್ತಾರೆ .
ವರ್ಷಕ್ಕೊಮ್ಮೆ ಕಾರ್ಕಳ ,ಕುಂದಾಪುರ ,ಬಂಟ್ವಾಳ ,ಮಂಗಳೂರು ಇತ್ಯಾದಿ ಊರಿನ ವೆಂಕಟರಮಣ ದೇವಸ್ತಾನ ಗಳಲ್ಲಿ ಅಹೋರಾತ್ರಿ ತಾಳ ಗಳ ಶಬ್ದ ನಿಲ್ಲಿಸದೆ ಭಜನೆ ಸಪ್ತಾಹ [೭ ದಿನ ವಾರ ಪೂರ್ತಿ ] ವಿಜೃಂಭಣೆ ಯಿಂದ ನಡೆಸುತ್ತಾರೆ .ಇಲ್ಲಿ ಗಂಡಸರು ,ಹೆಂಗಸರು ,ಮಕ್ಕಳು ಮತ್ತು ವಯೋವ್ರದ್ಧರು ಭಾಗವಹಿಸುತ್ತಾರೆ .
ಹಿಮ್ಮೇಳದಲ್ಲಿ ಹಾರ್ಮೊನಿಯುಂ ,ತಬಲಾ ಮುಖ್ಯವಾಗಿ ತಾಳ ವಾಧ್ಯ ಇತುತ್ತದೆ .
ದೇವರ ಮಂಟಪದ ಎದುರುಗಡೆ ಎತ್ತರ ವಾ ದ ದೀಪ ಸ್ಥಂಭದಲ್ಲಿ ಸದಾ ಜ್ಯೋತಿ ಬೆಳಗುತ್ತಾ ಇರುತ್ತದೆ .
ವಾರದ ಕೊನೆಯಲ್ಲಿ /ನಡುವೆ ಭಜನೆಯೊಂದಿಗೆ ನೃತ್ಯ ಮಾಡುತ್ತಾರೆ .ಕೀರ್ತನೆ ಜೊತೆ ಭಗವಂತನಲ್ಲಿ ಮೈ ಮರೆಯುತ್ತಾರೆ .
ಪುರಂದರದಾಸರು ,ಸಂತ ತುಕಾರಾಂ ನಾಮ್ ದೇವ್ ಮಹಾರಾಜ್ ದಾಸ ಶ್ರೇಷ್ಟ ರ ಕೆರ್ತನೆ ಹಾಡುತ್ತಾರೆ .ಇಲ್ಲಿ ಭಾಷಾ ಭೇಧ ಮರೆತು ಭಜನೆ ಯಲ್ಲಿ ಮಗ್ನ್ನರಾಗಿ ಭಗವಂತ ನ ನ್ನು ಸಮೀಪಿಸಿ ಮೋಕ್ಷ ಮಾರ್ಗ ಕಾಗಿ ಕಾಯುತ್ತಾರೆ .
ಜೈ ಶ್ರೀ ಪಾಂಡುರಂಗ ವಿಟ್ಟಲ ರಕುಮಾಯಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .

Tuesday, January 5, 2010

ಕನ್ನಡಕ್ಕೆ ಶಾಸ್ತ್ರೀಯಸ್ಥಾನ ಮಾನವಿವಾದ ಬಗೆಹರಿಸಲು ಸಹಕರಿಸಿ

ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ತಾನ ಮಾನ ಸಿಗಲೇ ಬೇಕು ಎನ್ನುವ ಒಕ್ಕೊರಳ ದನಿ ವಿಶ್ವದ ಪ್ರತಿಯೊಬ್ಬ ಕನ್ನಡಿಗನ ಬಾಯಲ್ಲಿ ಬರಲೇ ಬೇಕು .ಪಕ್ಷ ಭೇಧ ಮರೆತು ವಿಧಾನ ಮಂಡಲ /ಸಂಸದ್ ನಲ್ಲಿ ಚರ್ಚಿಸಿ ನ್ಯಾಯಾಲಯದ ಗಮನಕ್ಕೆ ಬಂದು ಮದ್ರಾಸ್ ಕೋರ್ಟು ತೀರ್ಮಾನ ಕನ್ನಡಿಗರ ಪರವಾಗಲಿ ಎಂದು ಹಾರೈಸುವ
ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.

Monday, January 4, 2010

ನವ ವರುಷ ಹರ್ಷದಾಯಕವಾಗಲಿ .

ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ ಸುಖ ,ನೆಮ್ಮದಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .

http://bharathanirman.blogspot.com

Friday, January 1, 2010

ನವ ವರ್ಷ ಶುಭಾಶಯಗಳು -2010

ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ / ಗೆಳೆಯ ರಿಗೆ ಸುಖ ,ನೆಮ್ಮದಿ ಶಾಂತಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .

Wednesday, December 30, 2009

ಚಿತ್ರ ನಟ ಸಾಹಸ ಸಿಂಹ ಡಾ ವಿಷ್ಣು ವರ್ಧನ್ ವಿಧಿ ವಶ .

ಅಗಲಿದ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ ನೀಡಲಿ
ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನಿರ್ಗಮನದ ದುಖ ಸಾಂತ್ವನ ವಾಗುವಂತಾಗಲಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯಕೊಂಡಿ ಯೊಂದು ಕಳಚಿರುವ ದುಖ ರಾಜ್ಯದ ಜನತೆಯನ್ನು ಆವರಿಸಿದೆ .
ನಾಗೇಶ್ ಪೈ