Saturday, July 9, 2011

ಉಪವಾಸ ಒಂದು ಶುದ್ಧೀಕರಣ ಮಾರ್ಗವೇ

ಉಪವಾಸ ಒಂದು ಶುದ್ಧೀಕರಣದ ಮಾರ್ಗ .
ಸಾಮಾನ್ಯವಾಗಿ ಕುಡಿಯುವ ನೀರಿನ ತೊಟ್ಟಿ ಯನ್ನು ಆಗಾಗ್ಗೆ ಶುದ್ಧಿ ಮಾಡಲು ತುಂಬಿದ ತೊಟ್ಟಿ ಯನ್ನು ಸಂಪೂರ್ಣ ಖಾಲಿ ಮಾಡಿ ಕ್ರಿಮಿನಾಶಕ ಸಿಂಪಡಿಸಿ ದ ನಂತರ ಪುನಃ ನೀರು ತುಂಬುತ್ತಾರೆ .ಧಾರ್ಮಿಕ ಪದ್ದತಿಯಲ್ಲಿ ನೀರು ತುಂಬುವ ಹಬ್ಬ ಒಂದು ಶುದ್ಧೀಕರಣ ವೂ ಹೌದು.ವಾರಕೊಮ್ಮೆ ಗುರುವಾರ /ಶನಿವಾರ ಉಪವಾಸ ವ್ರತ ಇಟ್ಟಿರುತ್ತಾರೆ .ಫ್ರಿಡ್ಜ್ ಕೂಡ ಆಗಾಗ್ಗೆ ಖಾಲಿ ಮಾಡುತ್ತ ಶುದ್ಧ ಆಹಾರ ತುಂಬಿ ಇಡಬೇಕು .ಅರೋಗ್ಯ ದ್ರಷ್ಟಿಯಲ್ಲಿ ಬಹಳ ಉತ್ತಮ ಸಲಹೆ ನಾವೆಲ್ಲರೂ ಪಾಲಿಸಬೇಕು .ಹಿಂದಿನ ಕಾಲದಲ್ಲಿ ರಷಿ/ಮುನಿ ಗಳು ತಪಸ್ಸು ಮಾಡಿ ಶುದ್ಧಿ ಮಾಡಿಕೊಂಡು ದೇವರ ವರ ಬೇಡಿ ಪಡೆದು ಧಾರ್ಮಿಕ ಕೆಲಸ ಮಾಡಿ ಲೋಕ ಕಲ್ಯಾಣದಲ್ಲಿ ತಾವು .ಪವಿತ್ರವಾದ ಮನಸ್ಸಿನವ ರಾಗುತ್ತಾರೆ .
ಜನ ಸಮಾಜ ಮತ್ತು ದೇಶ ಕಲ್ಯಾಣ ವಾಗಿ ಸಂತೋಷ ದಿಂದ ತುಂಬಿರುತ್ತಾರೆ .ಇದು ಉಪವಾಸದ ಪ್ರಭಾವ .ಇದೊಂದು ದೇಹ ಶುದ್ಧಿ ಆತ್ಮ ಶುದ್ಧಿ .ಮಾನಸಿಕವಾಗಿ ಶಕ್ತಿ ಬರುತ್ತದೆ .
ಮಹಾತ್ಮ ಗಾಂಧೀಜಿ ಯವರ ಮಾರ್ಗವು ಇ ತತ್ವ ವನ್ನು ಪಾಲಿಸಿದೆ .ಸ್ವಾತಂತ್ರ್ಯದ ಹೋರಾಟದಲ್ಲಿ ಉಪವಾಸ ವ್ರತ ಸಂಪೂರ್ಣ ಫಲ ಕೊಟ್ಟಿದೆ .
ಇತ್ತೀಚೆಗಿನ ದಿನಗಳು ಉಪವಾಸಕ್ಕೆ ಮಹತ್ವ ಇಲ್ಲದಂತಾಗಿದೆ.
ರಾಜಕಾರಣಿಗಳ ಬಲಹೀನತೆ ಉಪವಾಸ ರೂಪದಲ್ಲಿ ತೋರಿಸಿದರೆ ಉಪವಾಸ ಮಹತ್ವ ಕಳೆದು ಕೊಳ್ಳು ತ್ತದೆ .
ಯೋಗಾ ಗುರೂ ರಾಮದೇವ್ ಉಪವಾಸ ಮಾಡದೇ ಯೋಗಾ ಸನ ಗಳಲ್ಲಿ ಮುಂದುವರಿದರೆ ಅವರು ಇನ್ನೂ ಹೆಚ್ಚಿನ ಪ್ರಭಾವಿ ಪುರುಷ ರಾಗುತ್ತಿದ್ದರು .
ಇ ಸ್ಥಿತಿ ಎಲ್ಲಾ ರಾಜಕಾರಣಿ ಗಳಿಗೆ ಬರಬಾ ರದು.
ಇನ್ನೊಂದು ಬಲಹೀನತೆ ತೋರಿಸುವ ಕ್ರತ್ಯ ಆತ್ಮಹತ್ಯೆ.
ಯುವಜನತೆ ಇ ಕೆಲಸಕ್ಕೆ ಶರಣಾಗುತ್ತಾರೆ.
ಆತ್ಮ ಶಕ್ತಿ ಕಳೆದು ಕೊಳ್ಳುವುದು ಹೇಡಿಯ ಲಕ್ಷಣವಲ್ಲವೇ ?
ಎಲ್ಲವನ್ನೂ ಎದುರಿಸುವ ಪುರುಷ ಲಕ್ಷಣವಿದ್ದಾಗ ನಾವು ಸಾಧಿಸುವ ಕೆಲಸಗಳು ಜೀವನದಲ್ಲಿ ತುಂಬಾ ಇವೆ .
ಉಪವಾಸ ವ್ರತ ಹಿಡಿಯುವ/ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಧನೆಯ ಬಗ್ಗೆ ಯೋಚಿಸಿ.
ಇದು ಕೇವಲ ಪತ್ರಿಕೆ ಮತ್ತು ಮಾಧ್ಯಮಗಳ ವಿಷಯವಾಗದೇ ನಿರೀಕ್ಷಿತ ಫಲ ನಿಡುವಂತಾಗಲಿ.
ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಕುಂದಾಪುರ ನಾಗೇಶ್ ಪೈ .
ಸತ್ಯ ಮೇವ ಜಯತೇ
ಜೈ ಭಾರತ್ .

No comments: