Saturday, March 21, 2009

ಚುನಾವಣಾ ಕದನ -ಪ್ರಜೆ ಗಳ ನಿರೀಕ್ಷೆ /ಫಲಿತಾಂಶ

ಚುನಾವಣಾ ಕದನ -ಒಂದು ನೋಟ .
ಯುಗ ಯುಗ ಗಳಿಂದ ನಡೆದು ಬಂದಿದೆ ಇ ಯುದ್ಧ .ಕಾರಣಗಳು ಹಲವು .
ಧರ್ಮ ಸ್ಥಾಪನೆ .ಪುರಾಣ ಕಾಲದಲ್ಲಿ ರಾಜ್ಯಭಾರ ಇತಿಹಾಸ ಮತ್ತು ಚರಿತ್ರೆಯ ಪುಟಗಳಲ್ಲಿ .
ಅಧುನಿಕ ಜಗತ್ತಿನಲ್ಲಿ ಯುದ್ಧ ನಡೆಯುವುದು ಒಂದು ಕಾರಣ ಆಡಳಿತ ಚುಕ್ಕಾಣಿ ಹಿಡಿಯುವ ಸರ್ವ ಪ್ರಯತ್ನ .
ಪ್ರಜಾ ಪ್ರಭುತ್ವ ರಾಷ್ಟ್ರ ಗಳಲ್ಲಿ ಚುನಾವಣೆ ಮಹತ್ವ ಪಡೆದಿದೆ .
೧ ಚುನಾವಣಾ ಆಯೋಗ ಬದಲಾವಣೆ ಗಳನ್ನೂ ಕಂಡಿದ್ದರೂ ಸ್ವತಂತ್ರ ವಾಗಿ ನ್ಯಾಯ ಸಮ್ಮತ ತಿರ್ಮಾನ ತೆಗೆದು ಕೊಳ್ಳುವುದರಲ್ಲಿ ಸಂಪೂರ್ಣ ವಾಗಿ ಯಶಸ್ಸು ಕಾಣ ಬೇಕಾಗಿದೆ .ಆಡಳಿತ ದಲ್ಲಿರುವ ಸರಕಾರ ಅಥವಾ ಇನ್ನಿತರ ಪ್ರಭಾವಿ ಶಕ್ತಿ ಗಳ ಒತ್ತಡ ಕ್ಕೆ ಮಣಿಯದೆ ನ್ಯಾಯ ಮತ್ತು ನಿಷ್ಪಕ್ಷ ಪಾತ ಚುನಾವಣೆ ನಡೆಸ ಬೇಕು .ನೀತಿ ಸಂಹಿತೆ ಯನ್ನು ಜಾರಿಮಾಡಿ ಕ್ರಮ ಕೈಗೊಂಡು ಪ್ರಜೆ ಗಳನ್ನೂ ಸರಿ ದಾರಿ ತೋರಿಸಿ ಸರಕಾರ ಸ್ಥಾಪನೆಗೆ ಅನುಕೂಲ ಮಾಡಿ ಕೊಡ ಬೇಕು .
೨ ರಾಜಕೀಯ ಪಕ್ಷಗಳು .ಚುನಾವಣೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ .
ಒಂದು ಮುಖ ನ್ಯಾಯ ಸಮ್ಮತ ಪ್ರಜೆ /ದೇಶದ ಅಭಿವ್ರದ್ಧಿ ಗಾಗಿ ದುಡಿದು ಸಂಸತ್ತಿನ ಸಮಯ ದುರುಪಪಯೋಗ ಪಡಿಸದಂಥಹ ಅಭ್ಯರ್ಥಿ ಗಳನ್ನೂ ಕಣಕ್ಕೆ ಇಳಿಸಿ ಸರ್ವತೋಮುಖ ಅಭಿವ್ರದ್ಧಿ ಮಾಡಿ ದೇಶ /ಪ್ರಜೆ ಗಳ ಹಿತ ಕಾಪಾಡುವುದು .
ಈಗ ನಡೆ ಯುತ್ತ ಇರುವ ಇನ್ನೊಂದು ಮುಖ
ಅಪರಾಧ ಹಿನ್ನಲೆ ಇರುವ ಅಭ್ಯರ್ತಿ ಸ್ವಾರ್ಥ ಮನೋಭಾವ [ಸೀಟು ಸಿಕ್ಕಲೇ ಬೇಕು ] ಹಣ ,ಹೆಂಡ ಆಮಿಷ ತೋರಿಸಿ ಮನ ಒಲಿಸುವ ಸರ್ವ ಪ್ರಯತ್ನ ,ನೀತಿ ಸಂಹಿತೆ ಕಣ್ಣು ತಪ್ಪಿಸಿ ,ಗೆಲ್ಲುವ ಅಭ್ಯರ್ಥಿ ಹುಡುಕಾಟ ಮಾಡುವುದು ಇತ್ಯಾದಿ .
ಪಕ್ಷ ಗಳಲ್ಲಿ ಸೀಟು ಹಂಚಿಕೆ ವಿವಾದ ಬಗೆ ಹರಿಯದೆ ಇರುವುದು .ಮಿತ್ರರು ಶತ್ರು ಗಳಾಗಿ ಕೂಟ ಗಳಲ್ಲಿ ಗೊಂದಲ ಶ್ರಸ್ಟಿ.
ಪ್ರಧಾನಿ ಅಭ್ಯರ್ತಿ ಯಾರು ಎನ್ನುವ ನಿರ್ಧಾರ ಇಲ್ಲ .ಚುನಾವಣೆಯ ನಂತರ ಕಸರತ್ತು .ಇದು ಒಂದು ಅಶುಭ ಸೂಚನೆ ಪ್ರಜಾ ಪ್ರಭುತ್ವಕ್ಕೆ .
೩ ಪ್ರಜೆ ಗಳು ನಡೆಯ ಬೇಕಾದ ಹಾದಿ ಯಾವುದು ?
ಮತ ಚಲಾಯಿಸುವುದು ತಮ್ಮ ಹಕ್ಕನ್ನು ಪ್ರತಿ ಪಾದಿಸುವುದು .
ಯೋಗ್ಯ ಮತ್ತು ಕ್ಷೇತ್ರ /ರಾಜ್ಯ /ರಾಷ್ಟ್ರ ಪ್ರೇಮಿಗಳನ್ನು ಆರಿಸಿ ವಿಧಾನ ಸಭೆ /ಸಂಸತ್ತಿ ಗೆ ಕಳುಹಿಸುವ ಜವಾಬ್ದಾರಿ .
ಹಣ ,ಹೆಂಡ ಇತ್ಯಾದಿ ಆಮಿಷಕ್ಕೆ ಒಳಗಾಗದೆ ನಿರ್ಭಿತರಾಗಿ ಮತ ಚಲಾಯಿಸುವುದು .
ಮುಂದಿನ ಲೋಕ ಸಭಾ ಚುನಾವಣೆ ಸುಖಾಂತ್ಯ ಕಾಣಲಿ ಎಂದು ಹಾರೈಸುವ
ದೇಶ ಪ್ರೇಮಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

No comments: