Friday, June 19, 2009

ಇಂದು ಜೂನ್ ೧೯ ಅಪ್ಪಂದಿರ ದಿನಾಚರಣೆ

ಇಂದು ಜೂನ್ ೧೯ ಅಪ್ಪಂದಿರ ದಿನ ಆಚರಣೆ ಬಹು ಸೊಗಸು ಮತ್ತು ಎಲ್ಲಾ ಅಪ್ಪಂದಿರಿಗೆ ಆನಂದ ದಾಯಕ ದಿನವಾಗಿದೆ .
ತಮ್ಮ ವಿವಾಹ ಜೀವನ ಮೆಲುಕು ಹಾಕಿ ಪ್ರಥಮ ಬಾರಿಗೆ ಮಗು ಹುಟ್ಟಿ ಅದರ ಜೊತೆ ಸರಸ /ಮಗುವಿನ ಚೆಸ್ಟೆ /ತುಂಟತನ ಗಳ
ಸಂಪೂರ್ಣ ಅನುಭವ ಮತ್ತೆ ಯೋಚಿಸಿದಾಗ ಅಲ್ಲದೆ ಅದರ ಅರೋಗ್ಯ ಸ್ವಲ್ಪ ಏರು ಪೆರು ಆದಾಗ ಮನೆಯಲ್ಲಿ ಭಯದ ವಾತಾವರಣ ಮತ್ತು ಚೇತರಿಕೆ ಆದಾಗ ನಿಟ್ಟುಸಿರು ಬಿಟ್ಟು ಭಗವಂತನ ಜೊತೆ ಪ್ರಾರ್ಥನೆ ಇತ್ಯಾದಿ ಗಳನ್ನೂ ನೆನಪು ಮಾಡಿಕೊಂದಾಗ ಅಪ್ಪನ ಸ್ಥಾನ ಎಷ್ಟು ಅಮೂಲ್ಯ /ಕಷ್ಟ ತರವಾಗಿದೆ ಎನ್ನುವುದು ಅರಿವಾಗುವುದು .ಇದು ಇಲ್ಲಿಗೆ ಪೂರ್ಣ ವಾಗಿಲ್ಲ .ಮಕ್ಕಳ ವಿಧ್ಯಾಭ್ಯಾಸ ಜವಾಬ್ದಾರಿ ಶಿಸ್ತಿನಜೀವನ ,ಸಮಯ ಪರಿಪಾಲನೆ ಉತ್ತಮ ನಾಗರಿಕ ನಾಗಿ ಭವ್ಯ ಭಾರತದ ಪ್ರಜೆ ಯಾಗಿ ಮಾಡುವ ಜವಾಬ್ದಾರಿ ಎಲ್ಲಾ ಅಪ್ಪಂದಿರಿಗೆ /ಅಮ್ಮಂದಿರಿಗೂ ಸಮ ಪಾಲು ಇರುವುದನ್ನು ಇಲ್ಲಿ ಮರೆಯ ಬಾರದು.
ಇತ್ತೀಚೆಗಿನ ಅಪರಾಧ ಪ್ರಕರಣ ಗಳನ್ನೂ ನೋಡಿದರೆ ಅಪ್ಪಂದಿರು ಯಾವುದೊ ತಪ್ಪು ಮಾಡಿರುವರೋ ಎನ್ನುವ ಪ್ರಶ್ನೆ ಸ್ವಾಭಾವಿಕ ವಾಗಿ ಉಧ್ಭವ ವಾಗುತ್ತದೆ .
ಸಮಯ ಪ್ರಜ್ಞೆ ಜೀವನ ದಲ್ಲಿ ಬಹು ಮುಖ್ಯವಾಗಿದೆ .
ಅಶಿಸ್ತು/ಅಶಾಂತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ತಂದೆ /ತಾಯಿ ಮತ್ತು ಗುರುಗಳ ಸ್ಥಾನಕ್ಕೆ ಕುಂದು ಬರದಂತಹ ಆದರ್ಶ ಸಮಾಜ ರಚನೆ ಯಾಗಲಿ ಮತ್ತು ಎಲ್ಲಾ ಅಪ್ಪಂದಿರಿಗೆ ಸುಖ ಶಾಂತಿ ಮತ್ತು ನೆಮ್ಮದಿಯ ಬದುಕು ನೀಡಲಿ ಎಂದು ನಾವೆಲ್ಲರೂ ಪರಮಾತ್ಮ ನನ್ನು ಪ್ರಾರ್ತಿಸೋಣ ಬನ್ನಿ .
ನಾಗೇಶ್ ಪೈ
ಭವ್ಯ ಭಾರತ ನವ ನಿರ್ಮಾಣ ವೇದಿಕೆ .ಮೈಸೂರು .
ಜೈ ಕರ್ನಾಟಕ

No comments: