Sunday, July 19, 2009

ದೇಶದ ಮಕ್ಕಳು ಮುಂದಿನ ಭಾರತದ ಪ್ರಜೆಗಳು .

ಭವ್ಯ ಭಾರತದ ನವ ನಿರ್ಮಾಣ ಮತ್ತು ವಿದ್ಯಾರ್ಥಿ ಜೀವನ ಒಂದಕ್ಕೊಂದು ಪರಸ್ಪರ ಸಂಬಂಧ ಇರುವ ವಿಷಯ ಗಳಾಗಿವೆ .
ಹೊಸ ಹೊಸ ವಿಷಯ ಕಲಿತು ಜ್ಞಾನಾರ್ಜನೆ ಮಾಡಲು ಆಸಕ್ತಿ ಹುಟ್ಟಿನಿಂದಲೇ ಬರ ಬೇಕು .
ಹುಟ್ಟಿದ ಮಗುವು ತಾಯಿ ಯಿಂದಲೇ ಕಲಿಯಲು ಪ್ರಾರಂಭಿಸುವುದು.
ಪ್ರಾಣಿ /ಪಕ್ಷಿ ಗಳು ಕೂಡ ಇದೇರೀತಿ ಕಲಿಯುವುದನ್ನು ನೀವು ಪ್ರಕ್ರತಿ ಸುತ್ತಲು ದ್ರಶ್ಯಗಳು ಕಾಣಲುಸಿಗುತ್ತವೆ .
ಮನುಷ್ಯನು ಇ ಪ್ರಾಣಿ ಸಂಕುಲ ದಲ್ಲಿ ಸೇರಿರುವುದರಿಂದ ನಮ್ಮ ವಿಧ್ಯಾರ್ತಿಜೀವನ ಪ್ರಾರಂಭ .
ಎರಡು ವರೇವರ್ಷ ವಾಗುತ್ತಲೇಶಾಲೆಗೆ ಸೇರಿಸುವುದು ನಗರ ಪ್ರದೇಶ ಗಳಲ್ಲಿ ವಾಡಿಕೆ ಯಾಗಿದೆ .ಇಲ್ಲಿ ಆಟ ಮುಖ್ಯ ಓದುವುದು ಸ್ವಲ್ಪ ,ನೆಪ ಮಾತ್ರ .ಆದರೆ ಪುಸ್ತಕ ,ಟಿಫನ್ ,ನೀರು ತೆಗೆದು ಕೊಂಡುಹೋಗ ಬೇಕು .
ಪ್ರಾಥಮಿಕ ಶಿಕ್ಷಣ ಒಂದು ಹೆಜ್ಜೆ ಮುಂದೆ .ಸಹ ಪಾಟಿಗಳ ಪರಿಚಯ ಸಾಮೂಹಿಕ ವರ್ತನೆ ,ಹಂಚಿ ಕೊಂಡು ಜೀವನ ಹೇಗೆ ನಡೆಸುವುದು ಕಲಿಯ ಬಹುದು .ಸ್ಪರ್ಧಾತ್ಮಕ ಚಟುವಟಿಕೆ ಗಳು ಪ್ರರಂಭ ವಾಗುವವು.
ಇಲ್ಲಿ ಹೆತ್ತವರು /ಶಿಕ್ಷಕರು ತುಂಬಾ ಜಾಗರೂಕತೆವಹಿಸ ಬೇಕು ಭಾರತ ನವನಿರ್ಮಾಣ ಮಾಡುವಾಗ ಇದು ಅಡಿ ಗಲ್ಲು ಆಗುತ್ತದೆ .
ಮುಂದೆ ಪ್ರೌಢ ಶಾಲೆ ಶಿಕ್ಷಣ ಮಗುವಿನ ಶಿಸ್ತು ,ಸಂಯಮ ಬೆಳೆಸುವುದು .ಇಲ್ಲಿ ಏನ್ ಸಿ ಸಿ ಸ್ಕೌಟ್ಸ್ /ಗರ್ಲ್ಸ್ ಗೈಡ್ ತುಂಬಾ ಮುಂದೆ ಭಾರತದ ಸತ್ಪ್ಸಜೆ ಮಾಡುವುದರಲ್ಲಿ ಸಹಕಾರಿ ಯಾಗುತ್ತದೆ .ಈಗ ಮನೆ ಪಾಟಕ್ಕೆ ಹೋಗುವ ಚಾಲ್ತಿಯಲ್ಲಿದೆ .ಉತ್ತಮ ಅಂಕ ಪಡೆದು ವ್ಯಾಸಂಗ ಮಾಡಿ ಮುಂದಿನ ಜೀವನ ರೂಪಿಸಿ ಕೊಳ್ಳುವ ಜವಾಬ್ದಾರಿ ಚಿಕ್ಕ ವಯಸ್ಸಿನಲ್ಲಿ ಬರುತ್ತದೆ .
ಮುಂದೆ ಪದವಿ ಪಡೆಯುವ ಆಸಕ್ತಿ ಇರುವವರು ಹೆಚ್ಚು ಓದುತ್ತಾರೆ .ಇದರಿಂದ ಶ್ರದ್ಧೆ ಇಟ್ಟುಓದಿದವರಿಗೆ ಶುಭ ವಾಗುವುದು. .ಆದರೆ ಇತ್ತೀಚೆಗಿನ ದಿನ ಗಳಲ್ಲಿ ಶಿಕ್ಷಣ ಕ್ಷೇತ್ರ ದಲ್ಲಿ ರಾಜಕೀಯ ಮಾಡುವುದು ಹಣ ಸಂಪಾದನೆ ಮತ್ತು ವೋಟ್ ಬ್ಯಾಂಕ್ ಗಾಗಿ ಕೀಳು ಮಟ್ಟಕ್ಕೆ ಇಳಿದಿರುವುದು ಶೋಚನಿಯ .
ವಿದ್ಯಾರ್ಥಿ ಜೀವನ ಸುಗಮ ವಾಗಲುದಯವಿಟ್ಟು ರಾಜಕೀಯ /ರಾಜಕಾರಣಿ ಗಳನ್ನೂ ಪ್ರಾಮುಖ್ಯತೆ ಕೊಡದೆ ವಿಧ್ಯಾಭ್ಯಾಸ ದ ಕಡೆ ಗಮನ ಕೊಡಿ ಉತ್ತಮ ಅಂಕ ಪಡೆದು ಉತ್ತಿರ್ಣ ರಾಗಿರಿ. ದೇಶದ ಭವಿಷ್ಯ ನಿಮ್ಮ ಕೈ ಯಲ್ಲಿದೆ .
ಭವ್ಯ ಭಾರತದ ನವ ನಿರ್ಮಾಣ ಮಾಡಿರಿ .
ಶುಭ ಹಾರೈಕೆ .
ನಾಗೇಶ್ ಪೈ .

No comments: