Thursday, December 11, 2008

ಭಯೋತ್ಪಾದಕರ ಸಂಪೂರ್ಣ ನಾಶ .

ಅಮೇರಿಕಾದ ಪತ್ರಿಕೆ ನ್ಯೂ ಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಸಮಾಚಾರ ೨೦ ಶಂಕಿತ ಉಗ್ರರು ಪಾಕಿಸ್ತಾನದವರು ಅಲ್ಲಿ ತರಬೇತು ಹೊಂದಿದ ಮೇಲೆ ಭಾರತ ಪ್ರವೇಶ ಮಾಡಿದ್ದಾರೆ.ಆತ್ಮಾಹುತಿ ಧಾಳಿಗೆ ತಮ್ಮನ್ನು ತಯ್ಯಾರಿ ಮಾಡಿಕೊಂಡಿರುತ್ತಾರೆ .ಎಲ್ಲಾ ರೀತಿಯ ಸಂಚು ನಡೆಸಿ ಅವರಿಂದ ಭೀಕರ ಅನಾಹುತ ಕಾದಿದೆ ಇದನ್ನು ಭಂಧಿತ ಉಗ್ರ ಅಫ್ಜಲ್ ಕಸಬ್ ತನ್ನ ಹೇಳಿಕೆ ಕೊಟ್ಟಿರುವುದು ಮುಂದಿನ ಭಯಾನಕ ಘಟನೆಗೆ ಎಚ್ಚರಿಕೆ ಘಂಟೆ ಯಾಗಿದೆ .ಇದು ಈಗ ನಡೆಯುವ ಲೋಕ ಸಭೆ ಯಲ್ಲಿ ಚರ್ಚೆಯ ವಿಷಯ ವಾಗಿದೆ .ಗ್ರಹ ಮಂತ್ರಿಗಳ ಮುಂದಿನ ಕ್ರಮ ಗಳನ್ನೂ ಷಿಗ್ರ ವಾಗಿ ಜಾರಿಗೆ ತರಲು ಎಲ್ಲಾ ಪಕ್ಷಗಳು ಪಕ್ಷ ಭೇಧವನ್ನು ಮರೆತು ಸ್ವಾಗತಿಸಿದ್ದಾರೆ .ಈಗ ಬೇಕು ಸಂಪೂರ್ಣವಾಗಿ ಭಯೋತ್ಪಾದಕರ ನಾಶ .
ಅಮೇರಿಕಾದ ಫೆಡೆರಲ್ ಏಜನ್ಸಿ [ಎಫ್ ಬಿ ಆಯಿ ] ಮಾದರಿ ಯಲ್ಲಿ ಕೇಂದ್ರದ ಪಡೇ ರಚನೆ ಪೋಟ ಕಾನೂನು ಅದರ ಬಳಕೆ ಯಾಗಬೇಕು .
ರಾಜ್ಯದ ರಾಜಧಾನಿ ಗಳಲ್ಲಿ ಏನ್ ಎಸ್ ಜೀಗಳ ಸ್ಥಾಪನೆ .
ಈಗೇ ಮುಂದಿನ ಬಜೆಟ್ನಲ್ಲಿ ಹಣ ವನ್ನು ಕಾದಿರಿಸಬೇಕು .
ಉಗ್ರರ ದಮನವೇ ನಮ್ಮ ಮುಂದಿನ ಗುರಿಯಾಗಿರಲಿ.
ವಿಜಯವು ನಮ್ಮದೇ .
ಜೈ ಹಿಂದ್
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ
ನಮಸ್ಕಾರ .
ಸಮರ ಜಾರಿಯಿರಲಿ.

No comments: