Friday, December 26, 2008

ಹುತಾತ್ಮ ರಿಗೆ ನಮನ

ನವೆಂಬರ್ ೨೬ ಮುಂಬೈ ನಗರ ದಲ್ಲಿ ಕರಾಳ ದಿನ/ ಭಯೋತ್ಪಾದಕರ ಗುಂಡೇಟಿಗೆ ೧೭೩ ಜನರ ಬಲಿ.
ಇಂದಿಗೂ /ಎಂದೆಂದಿಗೂ ಮರೆಯಲಾಗದ ದಿನವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ ಪರವಾಗಿ ಹುತಾತ್ಮರಿಗೆ ನಮನ .
ಈಗ ಮುಂಬೈ ನಗರ ಸಾಮಾನ್ಯ ಸ್ಥಿತಿ ಗೆ ಮರಳುತ್ತಿದೆ .ಆದರೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟ ವೀರ ಯೋಧರ ಜೀವ ಮರಳುವುದು ಅಸಾಧ್ಯ .ಅವರ ಸ್ಮರಣೆ ,ತ್ಯಾಗ ಮತ್ತು ಬಲಿದಾನ ಚರಿತ್ರೆಯ ಪುಟಗಳಲ್ಲಿ ಚಿರಂತನ.ಇದನ್ನು ಪ್ರತಿಯೊಬ್ಬ ಭಾರತೀಯನ ಮನಗೊಂಡು ಅವರ ತ್ಯಾಗಕ್ಕಾಗಿ ಸ್ಮರಣೆ ಮಾಡುವುದು /ನಮಿಸುವುದು ಕರ್ತವ್ಯ .
ಆದರೆ ಭಾರತ -ಪಾಕಿಸ್ತಾನ ಭಾಂಧವ್ಯ ಯುದ್ಧದ ಭೀತಿ ಯಲ್ಲಿ ಅಂತ್ಯ .
ಭಾರತದ ಪ್ರಜೆಗಳ ನಿದ್ದೆ ಕೆಡಿಸಿದ ಸಂಧರ್ಭ .
ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಪರವಾಗಿ ಪಾಕಿಸ್ತಾನಕ್ಕೆ ಬುದ್ಧ್ಹಿವಾದ ಹೇಳಿದ್ದರೂ ಪಾಕಿಸ್ತಾನ ದಿನಕ್ಕೊಂದು ಹೇಳಿಕೆ ಕೊಟ್ಟು ದಿಕ್ಕು ಬದಲಾಹಿಸುತ್ತಿದೆ.
ಈಗ ಪ್ರವಾಸಿಗರು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದು ಉಚಿತವಲ್ಲ ಎಂದು ವಿದೇಶಾಂಗ ಖಾತೆ ಪ್ರಕಟಿಸಿದೆ .
ಇದೆ ವೇಳೆ ಉಗ್ರರ /ಪಾಕಿಸ್ತಾನದ ಧಾಳಿ ಭೀತಿಯ ಹಿನ್ನೆಲೆ ಯಲ್ಲಿ ವಿಮಾನ ನಿಲ್ದಾಣ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ .ಸಾರ್ವಜನಿಕರ ಸಹಕಾರ ಮುಖ್ಯ ವಾಗಿದೆ .
ಮುಂದಿನ ವರ್ಷ ೨೦೦೯ ನಿಮಗೆಲ್ಲರಿಗೂ ಸುಖ :ಶಾಂತಿ ಮತ್ತು ನೆಮ್ಮದಿಯ ಜೀವನ ಕೊಡಲಿ .
ನಾಗೇಶ್ ಪೈ
ಜೈ ಹಿಂದ್

No comments: