Tuesday, December 16, 2008

ಆಟೋ ನಲ್ಲಿ ಪ್ರಯಾಣ ಮತ್ತು ದರದಲ್ಲಿ ಸುಧಾರಣೆ

ಈಗ ಕರ್ನಾಟಕ ರಾಜ್ಯದಲ್ಲಿ ಬಸ್ ನಲ್ಲಿ ನೂಕು ನುಗ್ಗಲು ಇರುವುದರಿಂದ ಮತ್ತು ಆರೋಗ್ಯ ವಂಥರಲ್ಲದವರು ,ಮಹಿಳೆಯರು /ಹಿರಿಯ ನಾಗರಿಕರು ಆಟೋ ನಲ್ಲಿ ಪ್ರಯಾಣ ಮಾಡಬೇಕಾದ ಪ್ರಸಂಗ ಬಂದಿದೆ .
ಇಲ್ಲಿ ನಮ್ಮ ಮನೆಯ ಗೇಟ ನಿಂದ ನಗರದ ಬಸ್ ನಿಲ್ದಾಣ ಅಥವಾ ರೈಲ್ವೆ ಸ್ಟೇಷನ್ ಗೆ ಹೋಗಲು ೩ ಆಟೋ ಗಳಲ್ಲಿ ಅಳವಡಿಸಿದ ಮೀಟರ್ ೩ ರೀಡಿಂಗ್ ತೋರಿಸುವುದು .ಆಟೋ ಚಾಲಕರು ತಮ್ಮ ತಪ್ಪನ್ನು ಒಪ್ಪಿದ್ದಾರೆ .
ತಪ್ಪಿನ ವಿವರ ಕೊಟ್ಟಿದ್ದಾರೆ .ಮೋಸ ವನ್ನು ಬಹಿರಂಗ ಗೊಳಿಸಿದ್ದಾರೆ .
ಪ್ರತಿ ದಿನವೂ ಚಾಲಕನೊಡನೆ ಚರ್ಚೆ /ಜಗಳ ಸಾಮಾನ್ಯ ವಾಗಿದೆ .ಇದಕ್ಕಾಗಿ ನಗರದ ಪೋಲಿಸ್ ಸಹಾಯ ಕೊಡುತ್ತಾ ಇದೆ .
ಇದಕ್ಕೆ ಸುಧಾರಣೆ ತರುವ ನಾಗರಿಕರಿದ್ದಾರೆ.
ಸ್ಟಾರ್ ಆಫ್ ಮೈಸೂರ್ ನಲ್ಲಿ ಪ್ರಕಟವಾದ ಬೋಗಾದಿ ಯಿಂದ ಶ್ರೀಯುತ ಕೆ .ಅರ್ ಶೇಷಾದ್ರಿ ಯವರ ಸಲಹೆ ಇಲ್ಲಿ ಇದೆ .
೧ ದರದ ಬದಲು ಅತಿ ಕ್ರಮಿಸಿದ ದೂರ ವನ್ನು ಮೀಟರ್ ತೋರಿಸ ಬೇಕು .
ಇದರಿಂದಾಗಿ ದರ ಪರಿಷ್ಕರಣೆ ಯಾದಾಗ ಆ ದರ ಮತ್ತು ದೂರಕ್ಕೆ ಗುಣಿಸಿದಾಗ ನಾವು ಕೊಡಬೇಕಾದ ಮೊತ್ತ
ಸಿಗುತ್ತದೆ .
ನಗರ ಬಸ್ ಸ್ಟ್ಯಾಂಡ್ ನಿಂದ ಪ್ಪ್ರತಿಯೊಂದು ಪಾಯಿಂಟ್ ಗೆ ಅತ್ಹಿಕ್ರಮಿಸುವ ದೂರವಿರುವ ಚಾರ್ಟ್ ನ್ನು ನಾಗರೀಕರಿಗೆ ಸುಲಭ ವಾಗಿ ಕೈ ಗೆ ಸಿಗುವ ಪ್ರಚಾರ ಮಾಡ ಬೇಕು .
ಆಟೋ ಚಾಲಕರು ಮಾಡುವ ಮೋಸವನ್ನು ತಡೆಯ ಬಹುದು.
ನಗರ ಪೋಲಿಸ್ ಆಯುಕ್ತರ ಗಮನಕ್ಕೆ ತರಲಾಗಿದೆ ಮತ್ತು ರಾಜ್ಯದ ಸಾರಿಗೆ ಮಂತ್ರಿ ಯವರು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ
ಆಟೋ ಮೀಟರ್ ನಲ್ಲಿ ಸುಧಾರಣೆ ತರಬೇಕು .
ನಾಗರೀಕರ ಕಷ್ಟ ಪರಿಹರಿಸಿದರೆ ಮೈಸೂರಿನ ಸಾರ್ವಜನಿಕರು ಸುಖ ಪ್ರಯಾಣ ಮಾಡಬಹುದು .
ಸಂಭಂಧ ಪಟ್ಟವರು ಕ್ರಮ ಜರುಗಿಸಲಿ
ಸರ್ವೇ ಜನ ಸುಕಿನೋ ಭವಂತು :
ಲೇಖನ ಬರೆದ ಶ್ರೀಯುತ ಶೇಷಾದ್ರಿ /ಪ್ರೊ ಎಂ ಏನ್ ಗೋಪಾಲನ್ ಅವರಿಗೆ ಹ್ರತ್ಪೂರ್ವಕ ಧನ್ಯವಾದಗಳು .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ಜೈ ಕರ್ನಾಟಕ /ಹಿಂದ್

No comments: