Tuesday, January 26, 2010

ಕಡಲಿನ ಸ್ನೇಹಿತ ಮೀನು ಗಾರ ಗಣ ರಾಜ್ಯೋತ್ಸವ ಶುಭಾಶಯಗಳು

ಕರಾವಳಿ ಮೀನುಗಾರರು ಕಡಲಿನ ಸ್ನೇಹಿತರು -ವ್ಯಕ್ತಿತ್ವ ವಿಕಾಸ ಮಾಲಿಕೆ -೭ [ಸಂಗ್ರಹ ]
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ
ದೂರದ ತೀರವಸೇರುವುದೊಂದೇ ಬಾಳಿನ ಗುರಿಯಮ್ಮ .
ಇದು ಪ್ರಣಯರಾಜ ಶ್ರೀನಾಥ್ ,ಆರತಿ ,ಅಂಬರೀಶ್ ಮತ್ತು ಶಿವರಾಂ ನಟಿಸಿರುವ [ಶುಭಮಂಗಳ ]ಕನ್ನಡ ಚಲನ ಚಿತ್ರದ ಕವಿ ಬರೆದ ಸಾಲುಗಳು ರಾಜ್ಯದ ಜನತೆಗೆ ಕರಾವಳಿ ಕಡಲಿಗೂ ಮನುಷ್ಯನ ವ್ಯಕ್ತಿತ್ವಕ್ಕೂ ಅವನ ಪ್ರೇಮ ಗೆಳೆತನ ವನ್ನು ಸೂಚಿಸಿರುತ್ತಾನೆ . ಮಲೆಯಾಳಂ ಚಿತ್ರ ಚೆಮ್ಮೀನ್ ಸಹ ಕಡಲಿನ ಮೀನಿನ ಪ್ರೇಮದ ಭಾಷೆ ಬರೆಯುತ್ತಿದೆ .ಹೀಗೆ ಚಲನ ಚಿತ್ರಗಳಲ್ಲಿ ಕಡಲು ಮತ್ತು ಮನುಷ್ಯನಿಗಿರುವ ಸಂಭಂಧವನ್ನು ಹೊರಾಂಗಣ ದಲ್ಲಿ ಸುಂದರವಾಗಿ ಚಿತ್ರಿಕರಿಸಲಾಗಿದೆ .
ಮೀನುಗಾರ ಮುಂಜಾನೆ ಎದ್ದ ಬಳಿಕ ಬಲೆಯನ್ನು ಹೆಗಲ ಮೇಲೆ ಹೊತ್ತು ತನ್ನ ನಾಡದೋಣಿಯ ಕಡೆ ಧಾವಿಸುವ ಚಿತ್ರವನ್ನು ನೀವು ನೋಡಿರುತ್ತೀರಿ .
ಈಗಿನ ಸಾಫ್ಟ್ವೇರ್ ಉಧ್ಯೋಗಿಗಳು ಲ್ಯಾಪ್ಟಾಪ್ ಬ್ಯಾಗ್ ಹೆಗಲ ಮೇಲೆ ಹೋಲಿಸಬಹುದು .ಏಕೆಂದರೆ ಇಬ್ಬರೂ ಜೀವನೋಪಾಯ ,ಹಣ ಸಂಪಾದನೆ ದುಡಿಮೆ .
ಕಡಲಿನ ಜೊತೆ ಆಟ ಮಾರಕವೂ ಹೌದು .ನಿಸರ್ಗದ ಪ್ರಕೋಪಕ್ಕೆ ಬಿರುಗಾಳಿ ಬರುವಾಗ ದೋಣಿಗೆ ಹುಟ್ಟುವಾಗ ಅವರು ಸಂಕಷ್ಟಕ್ಕೆ ಒಳ ಪಡುತ್ತಾರೆ ಸಮುದ್ರದ ತೆರೆಗಳ ಏರು ಇಳಿತ ಎದುರಿಸುವಾಗ ಜೀವ ಹಾನಿ ಸಂಭವವಿದೆ .ಹೆಚ್ಚಿನ ವಿವರಗಳನ್ನು ಪತ್ರಿಕೆ /ಮಾಧ್ಯಮಓದಿ /ನೋಡಿರುತ್ತೀರಿ .ಇದು ಪ್ರಪಂಚದ ಎಲ್ಲಾಕರಾವಳಿ ಗಳ ಮೀನುಗಾರರ ಸಮಸ್ಯೆ .
ವಿಜ್ಞಾನ ಮುಂದುವರಿಯುವಾಗ ಸರಕಾರಗಳು /ಹವಾಮಾನ ಇಲಾಖೆ ಮೀನುಗಾರರ ಉಜ್ವಲ ಭವಿಷ್ಯಕ್ಕಾಗಿ ಸಹಾಯ ಮಾಡುತ್ತಿದೆ .
ಅದರೂ ಮೀನುಗಾರರು ಕಡಲನ್ನು ತಾಯಿಯಾಗಿ ಭಗವಂತನ ಸ್ಥಾನದಲ್ಲಿ ಪೂಜಿಸುತ್ತಾರೆ .ದೇವರನ್ನು ನಮಸ್ಕರಿಸಿ ದಿನದ ಶುಭಾರಂಭ .
ಕೋಳಿ ಸಾಕಣೆ,ಮೀನು ವ್ಯವಸಾಯ ,ಪ್ರಪಂಚದ ಅತೀಹೆಚ್ಚು ಧನ ಲಾಭ ಮತ್ತು ಮಾಂಸಹಾರಿ ಗಳ ನ್ನು ಅಕರ್ಷಿಸಿದೆ.
ರುಚಿಯಲ್ಲಿ ನದಿ ,ಕೆರೆ ಮತ್ತು ಸಮುದ್ರ ವಿಭಿನ್ನ .
ಕುಂದಾಪುರ ದಲ್ಲಿ ಖಾರ್ವಿ ಜನಾಂಗ ಮೀನುಗಾರರು .
ಕೆಲವರು ಮೋಜಿಗಾಗಿ ಮೀನು ಹಿಡಿಯಲು ಕೆರೆ ,ನದಿ ತೀರದಲ್ಲಿ ಗಟ್ಟಲೆ ನಿಶಬ್ದವಾಗಿ ಗಾಳ ಹಿಡಿದು ಗಾಳಕ್ಕೆ ಎರೆ ಹುಳು ಆಹಾರ ಸಿಕ್ಕಿಸಿ ಕಾಯುವ ದ್ರಶ್ಯ ಸರ್ವೇ ಸಾಮಾನ್ಯ .
ಕಡಲಿನ ಪ್ರೇಮಕ್ಕಾಗಿ ತಮ್ಮ ಜೀವ ತೆತ್ತ ಮೀನು ಗಾರರನ್ನು ನಿರ್ಲಕ್ಷಿಸ ಬೇಡಿ .
ಗಣ ರಾಜ್ಯೋತ್ಸವದ ಶುಭಾಶಯ ಗಳೊಂದಿಗೆ
ನಿಮ್ಮ ಭವ್ಯ ಭಾರತ ನವ ನಿರ್ಮಾಣ ವೇದಿಕೆ .
ನಮಸ್ಕಾರ .
ಕುಂದಾಪುರ ನಾಗೇಶ್ ಪೈ .
ಜೈ ಜವಾನ್ ಜೈ ಕಿಸಾನ್ .

No comments: