Thursday, January 8, 2009

ಕನ್ನಡ ಭಾಷೆ ಅಭಿವ್ರದ್ಧಿ ಪ್ರಚಾರ ಅಭಿಯಾನ ಚಾಲನೆ .

ಸುವರ್ಣ ಕನ್ನಡ ಭಾಷೆ ಯ ಅಭಿವ್ರದ್ಧಿ ಯ ಪ್ರಚಾರ ಅಭಿಯಾನ ಚಾಲನೆ.
ಕೇಂದ್ರ ಸರಕಾರವು ಈಗ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಕೊಟ್ಟು ಭಾಷೆ ಒಂದೇ ಅಲ್ಲದೇ ಕನ್ನಡಿಗರಿಗೆ ಗೌರವಿಸಿದಂಥಾಗಿದೆ.
ಈ ಭಾಷೆಗೆ ಕೊಟ್ಟ ಸನ್ಮಾನ ವನ್ನು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯದ ೫.೫ ಕೋಟಿ ಜನರ ಮೇಲೆ ಇದೆ .
ಈ ವಿಷಯದಲ್ಲಿ ಯಾವ ಪಕ್ಷ /ಜಾತಿ /ಧರ್ಮದ ರಾಜಕೀಯ ಇರ ಬಾರದು.
ನಾನು ಉದ್ಯೋಗ ದಲ್ಲಿ ಇರುವಾಗ ನೇರೆ ರಾಜ್ಯಗಳಾದ ಆಂಧ್ರ /ತಮಿಳುನಾಡು ನಲ್ಲಿ ಸೇವೆ ಯಲ್ಲಿ ಇರುವಾಗ ನನ್ನ ಅನುಭವವನ್ನು ನಿಮ್ಮೆಲ್ಲರ ಜೊತೆ ಹಂಚಿ ಕೊಳ್ಳುತ್ತಿದ್ದೇನೆ .
ಆ ಎರಡು ರಾಜ್ಯ ಗಳಲ್ಲಿ ಎಸ್ಟೆ ಕಷ್ಟ ಪಟ್ಟರು ನಾನು ಕನ್ನಡ ಪ್ರಚಾರ ಮಾಡಲೂ ಆಗಲಿಲ್ಲಾ .
ಭಾಷೆ ಕಲಿಯುವ ಆಸಕ್ತಿ ಇದ್ದ ನಾನು ಸುಲಭ ವಾಗಿ ಆ ಎರಡು ಭಾಷೆಯಲ್ಲಿ ಮಾತಾಡಬಲ್ಲೆ.
ಇ ಯೋಜನೆ ಯನ್ನು ಕರ್ನಾಟಕ ದಲ್ಲಿ ಸರಕಾರವು ಬಳಸಬೇಕು .
ಅಂಗ್ಲ ಭಾಷೆ ಶಬ್ದ ಉಪಯೋಗಿಸಿ ಮಾತಾಡುವ ಜನರಿಗೆ ಕನ್ನಡ ಭಾಷೆ ಯಲ್ಲಿ ಮಾತಾಡುವ /ಓದುವ /ಬರೆಯುವ ಹವ್ಯಾಸ ಇಟ್ಟುಕೊಂಡರೆ .ರಾಜ್ಯದಲ್ಲಿ ವಾಸಿಸುವಜನರ , ಬೇರೆ ಭಾಷೆ ಗಳಾದ ತೆಲುಗು ,ಮರಾಠಿ ,ತಮಿಳು ,,ಮಾರವಾಡಿ ,ಇತ್ಯಾದಿ ಜನರು ಕಡ್ಡಾಯವಾಗಿ ಕನ್ನಡ ಕಲಿಯ ಬೇಕಾಗಿದೆ .
ವ್ಯವಹಾರದಲ್ಲಿ ಕನ್ನಡ ಬಂದಾಗ ತಮಿಳುನಾಡು ,ಮಹಾರಾಷ್ಟ್ರ ವನ್ನು ಮಾದರಿ ಯಾಗಿ ಇಟ್ಟರೆ
ಕನ್ನಡ ಅಭಿವ್ರದ್ಧಿ ಯಾಗುವುದು ನಿಸ್ಸಂದೇಹ .
ದಯವಿಟ್ಟು ಕನ್ನಡವನ್ನು ಉಳಿಸಿ /ಬೆಳಸಿ .
ಭಾಷೆಗೆ ರಾಜಕೀಯ ಪಕ್ಷಗಳು ಒಂದಾಗಬೇಕು .
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

No comments: